Powered By Blogger

Wednesday, June 3, 2015

‪‎ದೇಶಾಭಿಮಾನದ ಪ್ರಶ್ನೆ ಓದುವುದಿಲ್ಲವಾ‬?

‪#‎TiredOfIndians‬ !! ಹಿಂಗೊಂದು ಹ್ಯಾಷ್ ಟ್ಯಾಗು ಅಮೇರಿಕೆಯ ಟ್ವಿಟ್ಟರ್ ನಲ್ಲಿ ಸೃಷ್ಟಿಯಾಯಿತು! "ಅಮೇರಿದವನೊಬ್ಬ ಸ್ಪೆಲ್ಲಿಂಗ್ ಬೀ ಗೆಲ್ಲಬೇಕು" ಅಂತ ಅಮೇರಿಕನ್ನನೊಬ್ಬ ಭಾರತೀಯರನ್ನು ಕಂಡು ಅಸೂಯೆಪಟ್ಟ. ಬೇಡ, ಬಿ ಪಾಸಿಟಿವ್, ಅದು ಅವನ ದೇಶಪ್ರೇಮ ಅಂದುಕೊಳ್ಳೋಣ. ಆದರೆ ಮತ್ತೊಬ್ಬ "ಸ್ಪೆಲ್ಲಿಂಗ್ ಬೀಯಲ್ಲಿ ಭಾಗವಹಿಸುವ ಪ್ರತಿಯೊಂದು ಮಗುವೂ ಮೂಲ ಅಮೇರಿಕನ್ನೇ ಆಗಬೇಕು" ಅಂತ ಹಲುಬಿದ. ಮತ್ತೊಬ್ಬ ಅಮೇರಿಕನ್ನ ಸ್ವಲ್ಪ ಮುಂದೆ ಹೋಗಿ “No American sounding names who won the spelling B. ‪#‎sad‬ ‪#‎fail‬” ಎಂದು ಟ್ವೀಟಿಸಿದ! ಇನ್ನು ಯಾರ್ಯಾರು ಏನೇನು ಟ್ವೀಟಿಸಿದರೋ. ಇಷ್ಟಕ್ಕೆಲ್ಲ ಕಾರಣವಾದದ್ದು ಅಮೇರಿಕೆಯ ಅತ್ಯಂತ ಪ್ರತಿಷ್ಠಿತ 'ಸ್ಕ್ರಿಪ್ಸ್ ಸ್ಪೆಲ್ಲಿಂಗ್ ಬೀ' ಯನ್ನು ಭಾರತೀಯ ಮೂಲದ ಮಕ್ಕಳು ಗೆದ್ದಿದ್ದು. ಯಾವ ದೇಶ ಜಗತ್ತಿಗೆಲ್ಲ ಧರ್ಮ ಸಹಿಷ್ಣುತೆಯ ಪಾಠ ಹೇಳುತ್ತೋ ಅದೇ ದೇಶದ ಕೆಲವರು ಈಗ ಮಾತ್ರ ಕೈ ಕೈ ಹಿಸುಕಿಕೊಳ್ಳತೊಡಗಿದ್ದಾರೆ. ಅವರ ದೇಶಾಭಿಮಾನ ಓಕೆ, ಆದರೆ ದೇಶಪ್ರೀತಿಯ ಅರ್ಥ ' ಪರರನ್ನು ತೆಗಳು' ಅಂತಲ್ಲವಲ್ಲ! ಅದೂ ಭಾರತೀಯರನ್ನು ಅಮೇರಿಕಾ ತೆಗಳುವುದಿದೆಯಲ್ಲ, ಅದು ಉಂಡ ಮನೆಗೆ ಎರಡು ಬಗೆದಂತೆ. ಅಮೇರಿಕಾ ಇಂದು ಹಿರಿಯಣ್ಣನಾಗುವುದರಲ್ಲಿ ಇದೇ ಅನಿವಾಸಿ ಭಾರತೀಯ ಶ್ರಮ ಸಾಕಷ್ಟಿದೆ. ಈಗಲೂ ಅದರ ಐಟಿ ಇಂಡಸ್ಟ್ರಿಯಂತಹ ಅನೇಕ ತಾಂತ್ರಿಕ ಕ್ಷೇತ್ರಗಳು ಭಾರತೀಯರ ಮೇಲೆ ಡಿಪೆಂಡ್ ಆಗಿದೆ. ಅಮೇರಿಕೆಯ ಹೆಮ್ಮೆಯ 'ನಾಸಾ' ದಲ್ಲಿ ಕೂಡ ಮೂವತ್ತು ಚಿಲ್ಲರೆ ಪರ್ಸೆಂಟ್ ವಿಜ್ನಾನಿಗಳು ಅನಿವಾಸಿ ಭಾರತೀಯರು ಎಂಬುದು ಲಿಬರ್ಟಿ ಸ್ಟ್ಯಾಚುವಿನಷ್ಟೇ ಸತ್ಯ! ನಮ್ಮ ಸರ್ಕಾರ ಕೋಟಿಗಟ್ಟಲೇ ಹಣವನ್ನ ಪ್ರತಿಭಾನ್ವಿತ ವಿದ್ಯಾರ್ಥಿಗಳ ಮೇಲೆ ಸುರಿದು, ಅವರನ್ನು ಐಐಟಿಯಂತಹ ಸಂಸ್ಥೆಗಳಲ್ಲಿ ಓದಿಸುತ್ತೆ. ಅಂಥವರಲ್ಲಿ ಅನೇಕರು ಎನೇನೋ ಕಾರಣ ಹೇಳಿ, ಅಮೇರಿಕೆಯ ಕಂಪನಿಗಳಿಗೆ ದುಡಿಯಲು ಹೋಗಿಬಿಡುತ್ತಾರೆ! ಆದರೆ ನಮ್ಮ ವಿದ್ಯಾರ್ಥಿಗಳ ಈ 'ಕುಗ್ಗಿದ ದೇಶಪ್ರೇಮ' ಅಮೇರಿಕೆಗೆ ಒಳ್ಳೆಯದನ್ನೇ ಮಾಡಿದೆ ತಾನೆ? ಇಷ್ಟೆಲ್ಲ ಮಾಡಿದ ಭಾರತ-ಭಾರತೀಯರ ಬಗ್ಗೆ ಕೆಲವು ಅಮೇರಿಕನ್ನರು ಹಂಗೆ ಮಾತಾಡುತ್ತಾರೆ ಅಂದರೆ ನಮಗೆ ಹೇಗಾಗಬೇಡ? ನೆನಪಿರಲಿ, ಇತ್ತೀಚೆಗೆ ಭಾರತೀಯರ ದೇಗುಲಗಳ ಮೇಲೆ ಅಲ್ಲಿ ನಡೆದ ದಾಳಿಗಳ ಕುರಿತ ವರದಿಗಳೂ, ಅಮೇರಿಕೆ ಅಸಹಿಷ್ಣುವಾಗುತ್ತಿದೆ ಎಂದು ಎಚ್ಚರಿಸುತ್ತಿವೆ! ಏನಂತೀರಿ?

ಸುಮ್ ಸುಮ್ನೆ ಗಲಾಟೆ ಮಾಡ್ತಾರೆ,ಏನು ಲಾಭವೋ...?!

ಮೊದಲೇ ಹೇಳಿಬಿಡುತ್ತೇನೆ ನಾನು ದೊಡ್ಡ ‪#‎ModiFan‬ ಅಲ್ಲ. ಅವರ ವರ್ಣರಂಜಿತ ವಸ್ತ್ರಗಳಾಗಲೀ, ವೈಭವೋಪೇತ ವಿದೇಶ ಪ್ರವಾಸವಾಗಲಿ, ಅದಮ್ಯ ಭಾಷಣಗಳಾಗಲೀ, ಕ್ಷಮಿಸಿ , ನನ್ನನ್ನು ಅಷ್ಟು ರಂಜಿಸಲಾರವು. ಆದರೆ ಯುಪಿಎ ಸಾಯಿಸಿ ಹೋದ ಆಶಾಭಾವವನ್ನು ಕಂಬ ಕೊಟ್ಟು ನಿಲ್ಲಿಸಿ ನಮ್ಮಲ್ಲೊಂದು ಜಂಬ ಸೃಷ್ಟಿಸುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ಕಂಠಮಟ್ಟ ಹಗರಣಗಳನ್ನೇ ತುಂಬಿಕೊಂಡಿದ್ದ ಸರ್ಕಾರವನ್ನು ನೋಡಿ ಬೇಸತ್ತಿದ್ದ ಭಾರತೀಯರಲ್ಲಿ “ಸರ್ಕಾರ ಅಂದ್ರೆ ಹಂಗಲ್ರಪ್ಪಾ..” ಅಂತ ತಿಳುವಳಿಕೆ ಮೂಡಿಸಿದ್ದಾರೆ. ಇವರಿಂದ ಸಾಧ್ಯವಾಗಬಹುದು ಎಂಬ ಆಶಾಭಾವ ಮೂಡಿಸಿದ್ದಾರೆ. ವೆಲ್, ಆದರೆ ವರ್ಷ ಪೂರೈಸಿದ ಈ ಸನ್ನಿವೇಷದಲ್ಲಿ ಕೆಲವು ತೀರಾ ಪೂರ್ವಗ್ರಹ ಪೀಡಿತ ಮನುಷ್ಯರಿಂದ ವಿಚಿತ್ರತಮ ಟೀಕೆಗೊಳಗಾಗುತ್ತಿದ್ದಾರೆ. “ಬಿಜೆಪಿ ಆಡಳಿತಕ್ಕೆ ಬಂದಿರುವುದರಿಂದ ಏನೋ ಅನಾಹುತ ಸಂಭವಿಸಿಯಾಗಿದೆ…” ಅಂತ ಕೆಲವರು ಬರೆಯುತ್ತಿದ್ದಾರೆ. ಬರ್ಕೊಳ್ಳಲಿ ಬಿಡಿ, ಆದರೆ ಅದನ್ನು'ದಿ ಹಿಂದು' ದಂತಹ ಪತ್ರಿಕೆಗಳು ಪ್ರಕಟಿಸುತ್ತಿವೆ!! ಮೋದಿಯನ್ನು ಹೆಜ್ಜೆ ಹೆಜ್ಜೆಗೂ ಹೊಗಳುವ ಅನೇಕ ನೆಟ್ಟಿಗರ ಬಗ್ಗೆ ನಮಗೆಲ್ಲ ಖಂಡಿತ ಬೇಸರವಿದೆ. ಮೋದಿಯನ್ನು ಬರೀ ಹೊಗಳಬೇಕೆಂದಲ್ಲ. ಆದರೆ ಟೀಕಿಸುವಲ್ಲಿ ತಾರ್ಕಿಕತೆಯಿರಬೇಕು. ಅದು ಯಾರೇ ಇರಬಹುದು. ಮೋಹನ್ ಭಾಗ್ವತ್ ಮದರ್ ತೆರೇಸಾರನ್ನು ಟೀಕಿಸಿದಾಗಲೂ ನಮಗೆ ಬೇಸರವಾಗಿದೆ. ಅದ್ಯಾರೋ ಮಣಿಶಂಕರ್ ಅಯ್ಯರ್ ಎಂಬ ಮಂತ್ರಿ 'ಮಹೋದಯ' ವೀರಸಾವರ್ಕರ್ ಬಗ್ಗೆ ಹಲುಬಿದಾಗಲೂ ನಮಗೆ ಅತೀವ ಹಿಂಸೆಯಾಗಿದೆ. ಕೆಲವರಿಗೆ ತಾವು ಹೇಳಿದ್ದನ್ನೆಲ್ಲ ಜನ ಕಣ್ಣುಮುಚ್ಚಿ ನಂಬಿಬಿಡುತ್ತಾರೆಂಬ 'ಅದ್ಭುತ' ಭ್ರಮೆ! ಬಿಡಿ 'ದಿ ಹಿಂದು' ಒಂಥರ ಹಾಗೇ. ಅಫ್ಜಲ್ ಗುರುನನ್ನು ನೇಣಿಗೆ ಹಾಕಿದಾಗ Vengeance (ಹಿಂಸೆ) Is Not Justice ಎಂದು ಸಂಪಾದಕೀಯ ಬರೆದ ಪತ್ರಿಕೆ ಅಂದರೆ ಕೇಳಬೇಕೆ? ಅದ್ಯಾರೋ ಮಂಜರಿ ಕಾಟ್ಜು ಎಂಬುವವರು ಒಂದು ‘ ಅಮೋಘ’ ಲೇಖನ ಬರೆದಿದ್ದಾರೆ. ಇವರೆಲ್ಲ ಯಾಕಿಷ್ಟು ಸಂಕುಚಿತವಾಗಿ, ಒಂದೇ ಧಾಟಿಯಲ್ಲಿ ಯೋಚಿಸುತ್ತಾರೆ, ಅದರಿಂದ ಅವರಿಗೇನು ಲಾಭ ಅಂತ ನಂಗಂತೂ ಗೊತ್ತಿಲ್ಲ. ಲೇಖನಕ್ಕೆ ಲಗತ್ತಿಸಿದ ವ್ಯಂಗ್ಯಚಿತ್ರವನ್ನೊಮ್ಮೆ ನೋಡಿ. “ಕೆಲವು ಧಾರ್ಮಿಕ ಕೇಂದ್ರಗಳ ಮೇಲೆ RSS ಸಣ್ಣಮಟ್ಟದ ದಾಳಿ ಮಾಡಿಸುತ್ತಿದೆ, ಅದರ ಮೇಲೆ ಮೋದಿ ತಮ್ಮ ಆಡಳಿತ ನಡೆಸುತ್ತಿದ್ದಾರೆ” ಎಂದು ಸಾರುವ ‘ಅದ್ಭುತ’ ಚಿತ್ರ. ಸರಿ, ಈ ಸಣ್ಣಮಟ್ಟದ ದಾಳಿಗಳಂತೆ ದೊಡ್ಡಮಟ್ಟದ ಉಗ್ರ ಚಟುವಟಿಕೆಗಳು ಅಪಾಯಕಾರಿಯಲ್ಲವೇನು? ಅವುಗಳ ಬಗ್ಗೆ ಇವರೆಲ್ಲ ಗಪ್ ಚುಪ್. ” Not a sprinkle, But a spread of saffron” ಅಂತೆ! ಹಿಂದು ಧರ್ಮದ ಬಗ್ಗೆ ಭಾರತದಲ್ಲಿ ಮಾತನಾಡದೆ ಮತ್ತೇನು ಸೈಬೀರಿಯಾದಲ್ಲಿ ಮಾತನಾಡಬೇಕಂತಾ? ಹೆಡ್ಡಿಂಗ್ ನಲ್ಲೇ ಇವರ 'ಸಿಕ್'ಯುಲಾರಿಸಮ್ ಗೊತ್ತಾಗಿಬಿಡುತ್ತೆ! ಆಹಾ, ಮೋದಿ ಸರ್ಕಾರ್ ಒಂದು ನಿಧಾನವಾದ ಆದರೆ ಖಂಡಿತ ಅಪಾಯಕಾರಿಯಾದ ಷಡ್ಯಂತರ ಅಳವಡಿಸಿಕೊಂಡಾಗಿದೆಯಂತೆ, ಅನಾಹುತವೊಂದೇ ಬಾಕಿಯಂತೆ! ನೋಡಿ..ನೀವೇ ಓದಿ..Link ಅನ್ನು ಕೆಳಗೆ ಕೊಟ್ಟಿದ್ದೇನೆ. “ಹೇಗೆ ಭಾರತ ಧರ್ಮ ಅಸಹಿಷ್ಣುವಾಗುತ್ತಿದೆ, ಮೋದಿ ಹೇಗೆ ಅಸಹಾಯಕರಾಗುತ್ತಿದ್ದಾರೆ, ಎಂಥಾ ಘೋರ ಅಪಾಯ ಕಾದಿದೆ” ಅನ್ನುವುದನ್ನೆಲ್ಲ, ಪಾಪ, ಲೇಖಕರು ಕಾಳಜಿಯಿಂದ ವಿವರಿಸಿದ್ದಾರೆ. ವೇಸ್ಟ್ ಆಗಬಾರದು ಅಲ್ಲವಾ? ಮತ್ತೆ ಓದಿ, ಕಮೆಂಟ್ ಮಾಡಿ. ಕಮೆಂಟ್ ಗಳು ಸಭ್ಯವಾಗಿರಲಿ.
http://www.thehindu.com/opinion/op-ed/all-those-who-want-to-eat-beef-can-go-to-pakistan-mukhtar-abbas-naqvi/article7244981.ece