Powered By Blogger

Monday, February 6, 2017

'ಯುವಾ"- 218 ಮನೆಗಳನ್ನು ಬೆಳಗಿರುವ 18ರ ಪೋರರಿವರು..!!

 ಸಾಮಾನ್ಯವಾಗಿ ಆ ವಯಸ್ಸು ಇಂಥವುಕ್ಕೆಲ್ಲ ಎಡೆ ಮಾಡಿಕೊಡುವುದಿಲ್ಲ! ಹೌದು, ಅದು ಜಗತ್ತು ಬಣ್ಣ ಬಣ್ಣವಾಗಿ ಕಾಣುವ ವಯಸ್ಸು. ಆದಷ್ಟು ಮನರಂಜನೆಯ ಅರಸುವ, ಗೆಳೆತನದಲ್ಲಿ ಬಂಧಿಯಾಗಿ ಮೋಜನನುಭವಿಸುವ ವಯಸ್ಸು. ಸಿನೆಮಾ ಗಿನೇಮಾ ಡೈಲಾಗ್ ಗಳನ್ನು ಕ್ರೇಜಲ್ಲಿ ಗಟ್ಟುಹೊಡೆದು, ಸ್ಟೈಲಾಗಿ ಆಗಾಗಿ ಹೊಡೆಯುತ್ತಿರುವ ವಯಸ್ಸು. Actually ಇವೆಲ್ಲ ಶುರುವಾದಾಗ, ಅವರಿಗೆ ಇಂಥದ್ದರಲ್ಲೂ ಸ್ಪಷ್ಟತೆ ಮೂಡದ, ಪ್ರೌಢಿಮೆ ಇರದ ವಯಸ್ಸು. ಅವರಾಗ ಮುಗಿಸಿದ್ದಿದ್ದು ಹತ್ತನೆಯ ತರಗತಿಯನ್ನಷ್ಟೇ!
     ಅವರಿಗೆ ಅಂಥದ್ದೇನಾಯಿತು ಅನ್ನುವ ಪ್ರಶ್ನೆಯೇ? ಚಿಕ್ಕದೊಂದು ಸ್ಫುರಣೆಯಾಯಿತು! ಹತ್ತನೇ ಕ್ಲಾಸು ಮುಗಿದಿದ್ದ ರಜೆಯ ಮೋಜಿನ ಸಮಯವದು. ರಜೆಯನ್ನು ಕಳೆಯಲು ಅವರಲ್ಲೊಬ್ಬನ ಮೂಲವಾದ, ದಕ್ಷಿಣ ಕನ್ನಡದ ಪುತ್ತೂರಿನ ಬಳಿಯ ಒಂದು ಕುಗ್ರಾಮಕ್ಕೆ ಬಂದಿದ್ದರು! ಕರಾವಳಿಯ ಪ್ರಕೃತಿ ಸೊಗಡು. ಹಚ್ಚ ಹಸಿರಿನ, ಗದ್ದೆ-ತೋಟಗಳ, ಕಾನುಕೋಟಲೆಗಳ ಪರಿಸರ. ಹಗಲೆಲ್ಲ ಮನಸಃ ಪೂರ್ವಕವಾಗಿ ಆಡಿ ಕುಣಿದರು. ಊರೆಲ್ಲ ತಿರುಗಿ ಬಸವಳಿದು ಸಂಜೆಯಾಗುವಷ್ಟರಲ್ಲಿ ಹಳ್ಳಿಯ ಅವರು ಉಳಿದಿದ್ದ ಮನೆಗೆ ಬಂದರು. ಇವರೆಲ್ಲ ಒರಗಿ ವಿಶ್ರಾಂತಿ ಪಡೆಯುತ್ತಿದ್ದಂತೆ, ಸೂರ್ಯನೂ ವಿಶ್ರಾಂತಿಗೆಂದು ಬಾನಂಚಿಗೆ ಸಮೀಪಿಸತೊಡಗಿದ. ಕೊನೆಗೊಮ್ಮೆ ಮುಳುಗಿಹೋದ.
      ಇವರೆಲ್ಲ ಮೈಸೂರಿನಂತಹ ಪಟ್ಟಣದಲ್ಲಿ ಬೆಳೆದವರು. ಇಷ್ಟೊತ್ತಿಗೆಲ್ಲ ಅವಶ್ಯಕತೆ ಇದ್ದರೂ ಇಲ್ಲದಿದ್ದರೂ, ಮನೆಯ ತುಂಬೆಲ್ಲ ಟ್ಯೂಬ್ ಲೈಟ್ ಹಾಕಿ ಅಭ್ಯಾಸ. ಇಲ್ಲಿ ಯಾವ ಲೈಟನ್ನೂ ಯಾರೂ ಹಾಕಲಿಲ್ಲ. ಇನ್ನೊಂದು ಸ್ವಲ್ಪ ಹೊತ್ತಲ್ಲಿ ಸಂಪೂರ್ಣ ಕತ್ತಲಾಗತ್ತೆ, ಆಗ ಹಾಕುತ್ತಾರೆ ಅಂತ ಸುಮ್ಮನಾದರು. ಅವರಲ್ಲೊಬ್ಬ ಧರಂ ವೀರ್ ಸಿಂಗ್. ಆತನಿಗೋ, ಕತ್ತಲ ಕಂಡರೆ ಎಲ್ಲಿಲ್ಲದ ಭಯ.
ಹೊತ್ತಾಯಿತು, ಕತ್ತಲಾಯಿತು, ಊಹೂಂ, ಯಾವ ಲೈಟೂ ಬೆಳಗಲಿಲ್ಲ. ಕಾರಣ ವಿಚಾರಿಸಿದಾಗ ಆ ಹಳ್ಳಿಯ ಜನ ಇನ್ನೂ ಕರೆಂಟ್ ನ ಮುಖವನ್ನು ನೋಡೇ ಇಲ್ಲ ಅಂತ ಗೊತ್ತಾಯಿತು!
       ಅದು ಉತ್ಸಾಹೀ ವಯಸ್ಸು. ಅದು ಸಾಹಸಪ್ರಿಯ ವಯಸ್ಸು ನೋಡಿ. ಆದರೆ ದುರಂತ ಏನೆಂದರೆ ನಮ್ಮ ಯುವ ಸಾಹಸ-ಉತ್ಸಾಹಗಳೆಲ್ಲ ಬೇಡದ್ದರಲ್ಲಿ ವಿನಿಯೋಗವಾಗಿ ದಿಕ್ಕು ತಪ್ಪಿಬಿಡುತ್ತವೆ. ಇಲ್ಲಿ ಹಾಗಾಗಲಿಲ್ಲ. ಭಂಡ ಧೈರ್ಯ ಮಾಡಿ, ಈ ಗೆಳೆಯರು ಕೂಡಿ ಇವರಿಗೆಲ್ಲ ಬೆಳಕಾಗಬೇಕು ಅಂತ ತೀರ್ಮಾನಿಸಿಯೇ ಬಿಟ್ಟರು!
        ಅದೇ ಈಗ YUVA(Youth United for a Vision to Achieve) ಅನ್ನೋ ಹೆಸರಿನಲ್ಲಿ ಗುರುತಿಸಿಕೊಂಡಿರುವ ಸಂಸ್ಥೆಯ ಶೈಶವಾವಸ್ಥೆ! ಅಂದು ನಾಲ್ವರಿದ್ದದ್ದು, ಇವತ್ತು ತೊಂಬತ್ತಾರು ಜನರಿರುವ ತಂಡವಾಗಿ ಬೆಳೆದಿದೆ. ಆವತ್ತು ಆ ಮನೆಯನ್ನು ಬೆಳಗಿದ್ದು, ಇವತ್ತು ಬರೋಬ್ಬರಿ 218 ಮನೆಗಳಿಗೆ ಬೆಳಕು ನೀಡಿರುವ ಸಂಸ್ಥೆಯಾಗಿ ಬೆಳೆದಿದೆ! ಆವತ್ತು ಅಂಬೆಗಾಲಿಟ್ಟಿದ್ದ ತಂಡ, ಇವತ್ತು ಎಂಟು ಪ್ರಾಜೆಕ್ಟ್ ಗಳನ್ನು ಮಾಡಿ ಮುಗಿಸಿದೆ! ಆವತ್ತು ಕತ್ತಲಿಗೆ ಹೆದರಿದ್ದ ಪೋರರು, ಇವತ್ತು ಕತ್ತಲಲ್ಲಿದ್ದವರಿಗೆ ಒಂದು ಹಿಡಿಯಷ್ಟಾದರೂ ಬೆಳಕನ್ನು ಕೊಡುವ ಸಾರ್ಥಕ್ಯ ಮೆರೆದಿದ್ದಾರೆ! ಆವತ್ತು ಹಸಿ ಮನಸ್ಸಿನ ಹುಚ್ಚು ಕನಸು ಅನ್ನಿಸಿಕೊಂಡಿದ್ದು, ಇವತ್ತು ಸಮಾಜಕ್ಕೆ ಬಿಸಿರಕ್ತ ತಂಪೆರೆದ ಆಶಾಕಿರಣದಂತೆ ಭಾಸವಾಗಿದೆ. What A Journey!


      

( ಯುವಾ ಒಂದು ರಿಜಿಸ್ಟರ್ಡ್ ಎನ್ ಜಿ ಒ. ಕಾಗದ ಪತ್ರದ ಚಿತ್ರ ಮೇಲಿದೆ)

ಪೋರರೇ ತುಂಬಿದ್ದ 'ಯುವಾ' ಪ್ರಥಮ ದೊಡ್ಡ ಹೆಜ್ಜೆ ಇಟ್ಟಿದ್ದು ಪುತ್ತೂರಿನಲ್ಲಿ. ಯುವಾದ ಸ್ಥೂಲ ಪ್ಲಾನ್ ಇರುವುದೇ. "ಅತ್ಯುತ್ಕೃಷ್ಟ ಸೋಲಾರ್ ಕಿಟ್ ಗಳನ್ನು ಖರೀದಿಸಿ, ಇನ್ನೂ ಕರೆಂಟ್ ಲೈನ್ ಗಳು ಬಾರದ, ತೀರಾ ಹಿಂದುಳಿದ ಹಳ್ಳಿಗಳನ್ನು ಗುರುತಿಸಿ, ಅಲ್ಲಿಯ ಮನೆಗಳಿಗೆ ಅಳವಡಿಸುವುದು". ಇಂತಹ ಪ್ರತೀ ಸೋಲಾರ್ ಕಿಟ್ ಗೂ 3500 ರೂಪಾಯಿಗಳ ಖರ್ಚಾಗುತ್ತಿತ್ತು. ಒಂದೇ ವಾರದಲ್ಲಿ ಶತಾಯುಗತಾಯು ಪ್ರಯತ್ನಿಸಿ 76,800 ರೂಪಾಯಿಗಳನ್ನು ಮೈಸೂರಿನಲ್ಲಿ ಜನರಿಂದ ಒಟ್ಟು ಮಾಡಿದ ಯುವಾ ತಂಡ, ಪುತ್ತೂರಿನ ಬಳಿಯ ಬೆಳಕು ಕಾಣದಿದ್ದ 'ಸೆನಾ' ಎಂಬ ಹಳ್ಳಿಗೆ ಬಂದಿಳಿದು, ಮೂವತ್ತೈದು ಮನೆಗಳಿಗೆ ತಮ್ಮ ಸೋಲಾರ್ ಕಿಟ್ ಅನ್ನು ಅಳವಡಿಸಿ, ಅಲ್ಲಿಯ ಜನ ಪ್ರಥಮಬಾರಿಗೆ ರಾತ್ರಿಯಲ್ಲೂ ಸ್ಪಷ್ಟವಾಗಿ ಕಾಣುವಂತೆ ಮಾಡಿದರು. ಅಷ್ಟರಲ್ಲೇ, ಹೆಚ್ಡಿ ಕೋಟೆ, ಪುತ್ತೂರು ಮತ್ತು ಹುಣಸೂರಿನ ಮೂವತ್ತು ಮನೆಗಳನ್ನೂ ಸೋಲಾರ್ ದೀಪಗಳಿಂದ ಬೆಳಗಿಸಿ, ಗೆಲುವಿನ ನಗೆ ಬೀರಿದರು. ಅಲ್ಲಿಂದ ಶುರುವಾಯಿತು ನೋಡಿ, ಈ ತರುಣ-ತರುಣಿಯರ ನಾಗಾಲೋಟ!
     "ಒಂದು ಚಾಲೆಂಜ್, ಅದಕ್ಕೆ ನಾವು ಪಟ್ಟ ಕಷ್ಟಗಳು, ಮತ್ತು ಕೊನೆಗೆ ಅದಕ್ಕೆ ಸಿಕ್ಕ ಜಯ" ಇದು ನಮ್ಮ ಕೈಕಾಲುಗಳಲ್ಲಿ ನವ ಹುರುಪೊಂದೊಂದನ್ನು ತುಂಬುತ್ತದೆ.  ಇಷ್ಟು ಮಾಡುವಷ್ಟರಲ್ಲಿ ಗುಂಪಿಗೆ, "ಇನ್ನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ" ಅನ್ನುವ ಭಂಡ ಧೈರ್ಯ, ಛಲ ಜೊತೆಯಾಯಿತು. ತಮ್ಮೊಂದಿಗೆ ಇನ್ನಷ್ಟು ಸಾಹಸಿ, ಆಸಕ್ತ ತರುಣ/ಣಿ ಯರನ್ನು ಸೇರಿಸಿಕೊಳ್ಳತೊದಗಿದರು. ಮೈಸೂರು ಮತ್ತು ಬೆಂಗಳೂರಿನಲ್ಲಿ "ಯುವಾ' ಸಂಸ್ಥೆಯ ಅಧಿಕೃತ ಎರಡು ಬ್ರಾಂಚ್ ಗಳನ್ನು ತೆಗೆದರು. ಇಂಥ ಕೆಲಸಗಳನ್ನು ಮಾಡುವಾಗ ಎದುರಾಗುವ ಅತಿದೊಡ್ಡ ತಲೆನೋವು, Funding. ಹಣ ಹೊಂದಿಸುವಿಕೆ. ಇವರುಗಳೋ ಇನ್ನೂ ಓದುತ್ತಿರುವ ವಿದ್ಯಾರ್ಥಿಗಳು, ದುದಿಯುವವರಲ್ಲ. "ಅಪ್ಪಾ ಸಮಾಜ ಸೇವೆ ಮಾದುತ್ತೇವೆ, ಒಂದಷ್ತು ಲಕ್ಷ ದುಡ್ದು ಕೊಡಿ" ಅಂತ ಮನೆಯಲ್ಲಿ ಕೇಳುವುದು ಬಾಲಿಶ. ಸಮಾಜಕ್ಕೆಲ್ಲ್ಲ ಹಂಚಬಹುದಾದಷ್ಟು ದುಡ್ಡು ಹೊಂದಿದ ಶ್ರೀಮಂತ ಕುತುಂಬ ಇವರದ್ಯಾರದ್ದೂ ಆಗಿರಲಿಲ್ಲ. ಆದ್ದರಿಂದ, ಸಮಾಜದಿಂದಲೇ ವಿವಿಧ ವಿಧಾನಗಳಿಂದ ಹಣ ಸಂಗ್ರಹಿಸಿ, ಅದನ್ನು ಸಮಾಜಕ್ಕೆ ಸಮರ್ಥವಾಗಿ ಹಿಂದಿರುಗಿಸುವ ಶ್ಲಾಘನೀಯ ನಿರ್ಧಾರ ಇವರದ್ದು.

img
    
 Gudville ಅನ್ನುವ ಸಂಸ್ಥೆ, ಇಂತಹ ಎನ್ ಜಿ ಒ ಗಳಿಗೆ, ಆನ್ಲೈನ್ ಮಾಧ್ಯಮದಲ್ಲಿ ಹಣ ಸಂಗ್ರಹಿಸಲು ವೇದಿಕೆ ಒದಗಿಸಿಕೊಡುತ್ತದೆ. ಅದು ನಡೆಸಿದ ಸ್ಪರ್ಧೆಗಳಲ್ಲಿ ಯುವಾ ತಲಾ ಎರಡು ಬಾರಿ ವಿನ್ನರ್ ಹಾಗೂ ರನ್ನರ್ ಅಪ್ ಆಗುವ ಮೂಲಕ 2.5 ಲಕ್ಷ ರೂಪಾಯಿಗಳನ್ನು ಗೆದ್ದಿತು. ಯುವಾಗೆ ಕಸುವು ಬಂದಂತಾಯಿತು.
      ಪ್ರಾರಂಭದಲ್ಲಿ 3500 ರೂಗಳಷ್ಟಾಗುತ್ತಿದ್ದ ಉಪಕರಣ ವ್ಯಚ್ಚ, ಈಗ 2200ಕ್ಕೆ ಇಳಿದಿತ್ತು. ಅದಾಗಲೆ ಯುವಾ ಮತ್ತೆರಡು ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಂಡಾಗಿತ್ತು. ಅದು ಕಾರವಾರ ತಾಲೂಕಿನ ಕರ್ತೋಲಿ ಗ್ರಾಮ, ಸಣಕೆ ವಾಸೆ, ಮತ್ತು ಕದ್ರಾ ಬಳಿಯ ಕೆಲವು ಹಳ್ಳಿಗಳು. ಯುವಾ ತಂಡ ಬಂದು ಬೀಡುಬಿಟ್ಟಿತು. ಶುರುವಾಯಿತು ನೋದಿ Light-Up Revolution-1. ತಂಡದ ಬದ್ಧತೆ ಹೇಗಿತ್ತೆಂದರೆ, ಕೇವಲ ಇಪ್ಪತ್ನಾಲ್ಕು ಗಂಟೆಯೊಳಗೆ ಅಲ್ಲಿಯ 63 ಮನೆಗಳು ಸೋಲಾರ್ ಬೆಳಕಿನಿಂದ ಪ್ರಜ್ವಲಿಸತೊಡಗಿದವು. ಅದರಲ್ಲಿಯೂ 'ಸಣಕೆ ವಾಸೆ" ಸಮರ್ಪಕ ರಸ್ತೆ ಸಂಪರ್ಕವೂ ಇರದ, ಅನಾಮತ್ತು ಇಪ್ಪತ್ತು ಕಿಲೋಮೀಟರ್ ಗಳನ್ನು ನಡೆದುಕೊಂಡೇ ತಲುಪಬೇಕಾದ ಗಮ್ಯ! ಇವರೊಂದೇ ನಡೆದು ಹೋಗುವುದಲ್ಲ, ಕಿಟ್ ಸಹಿತ ಎಲ್ಲ ಉಪಕರಣಗಳನ್ನೂ ನಡೆದೇ ಸಾಗಿಸಬೇಕು! ಅಲ್ಲಿಯ ಜನರಲ್ಲಿ ಮಂದಹಾಸ, ಈ ಯುವಶಕ್ತಿಯ ಮೈಗಳಲ್ಲಿ ರೋಮಾಂಚನ. ಅಷ್ಟರಲ್ಲೆ Light-Up Revolution-2 ಕೂಡ ನಡೆದುಹೋಯಿತು. ಅದರ ಅಡಿಯಲ್ಲಿ ಪೆಂಜನಹಳ್ಳಿ ಮತ್ತು ಹೆಚ್ಡಿ ಕೋಟೆಗಳ ಹದಿನಾರು ಮನೆಗಳು ದೀಪ ಕಂಡವು.

img
       ಅದು ಜನವರಿ, 2015. ಸರ್ಕಾರ ಕಣ್ಣಿಗೂ ಈ ಯುವಶಕ್ತಿ ಬಿತ್ತು. ಸ್ವತಃ  ಗವರ್ನ್ಮೆಂಟೇ ಎಪ್ಪತ್ತೈದು ಮನೆಗಳಿಗೆ ಕಿಟ್ ಅಳವಡಿಸಲು ಹಣ ಮಂಜೂರು ಮಾಡಿತು. LightUp Revolution-2 ಅಡಿಯಲ್ಲಿ, ರಂಗಾಯಣ ಕೊಪ್ಲು ಮತ್ತು ಹುಣಸೂರಿನ ಬಳಿಯ 75 ಮನೆಗಳೂ ಬೆಳಕು ಕಂಡವು. ಈಗ ಮಾಧ್ಯಮಗಳಿಗೆ ಗಮನ ಕೊದದೇ ಬೆರೆ ವಿಧಿಯೇ ಇರಲಿಲ್ಲ! ರೇಡಿಯೋ ಚಾನೆಲ್ಗಳು, ಸುದ್ದಿ ವಾಹಿನಿಗಳು ಯುವಾದ ಪ್ರಮುಖರನ್ನು ಸಂದರ್ಶಿಸಿ ಪ್ರಸಾರ ಮಾಡಿದವು.
       ಆವತ್ತು ಹತ್ತನೆ ತರಗತಿಯಲ್ಲಿದ್ದವರು, ಇವತ್ತು ಇಂಜಿನಿಯರಿಂಗ್, ಮೆಡಿಕಲ್ ಮುಗಿಸುವ ಹಂತದಲ್ಲಿದ್ದಾರೆ. ಬೆಂಗಳೂರಿನ ನಾಲ್ಕು ಮತ್ತು ಮೈಸೂರಿನ ಎರಡು ಕಾಲೇಜುಗಳಲ್ಲಿ ಯುವಾದ ಪಡೆಗಳೇ ಇವೆ. "Our Youth are not useless, they are usedless" ಅಂದಿದ್ದರು ವಿವೇಕಾನಂದರು. ಆದರೆ ಇಂತಹ ಯುವ ಜನತೆ, ತಮಗೆ ತಾವೇ ಅವಕಾಶಗಳನ್ನು ಸೃಷ್ಟಿಸಿಕೊಂಡು ಸಮಾಜಸೇವೆಗೆ ಟೊಂಕ ಕಟ್ಟಿ ನಿಂತಿದೆ! ಸಮಾಜದ ಕಷ್ಟಕೋಟಲೆಗಳ ವಿರುದ್ಧ 'ನಾವೊಂದು ಕೈ ನೋಡೇ ಬಿಡ್ತೀವಿ ನನ್ಮಗಂದ್, ಯಾಕ್ ಸರಿ ಆಗಲ್ಲ?" ಅಂತ ತೊಡೆ ತಟ್ಟಿ ನಿಂತಿದೆ. ದೇಶದ ತುಂಬಾ ನಾವು ಮಾಡಿಕೊಂಡಿರುವ ಗಲೀಜಿಗೆ, "ಥೂ ಈ ದೇಶದ್ ಹಣೆಬರಹನೇ ಇಷ್ಟು" ಅಂತೆಲ್ಲ ದೇಶವನ್ನೆ ಬಯ್ಯುತ್ತಿರುತ್ತೇವೆ. ಅಂತಹುದರಲ್ಲಿ "ಬದಲಾವಣೆ ಶುರಾಗುವುದಾದರೆ ಅದು ನಮ್ಮಿಂದಾಗಲಿ" ಅಂತ ಎದೆಯುಬ್ಬಿಸುವ ಈ ಯುವಕರಿಗೆ ನಾವು ಸಪೋರ್ಟ್ ಮಾಡಬೇಕು ಅಲ್ಲವೇ?
       "ಯುವಾ" ನಾಡಿದ್ದು ಫೆಬ್ರುವರಿ 14ರಿಂದ ಮೂರುದಿನ ಉತ್ತರಕನ್ನಡದ, ಯಲ್ಲಾಪುರ ಮತ್ತು ಜೊಯಿಡಾ ಬಳಿಯ ಹಳ್ಳಿಗಳಿಗೆ BLUR-2 ಎಂಬ ಪ್ರಾಜೆಕ್ಟ್ ಅಡಿ ಮನೆಗಳನ್ನು ಬೆಳಗಲು ಹೊರಟು ನಿಂತಿದೆ. ಆದರೆ, ಕೊನೆಯ ಸಮಯದಲ್ಲಿ ಕೊಂಚ ಹಣಕಾಸು ಸಮಸ್ಯೆ ಉದ್ಭವಿಸಿದೆ. ನಮಗೆ ಡೈರೆಕ್ಟ್ ಆಗಿ ಹೋಗಿ ಹಿಂದುಳಿದ ಸಮಾಜಕ್ಕೆ ಬೆಳಕು ನೀಡಲು ಸಾಧ್ಯವಿಲ್ಲ. ಇವರಿಗಾದರೂ ಕೊಂಚವಾದರೂ, ಕೈಲಾದಷ್ಟಾದರೂ ನೆರವಾಗಿ, ನಮ್ಮ ಪಾಲಿನ ಪುಣ್ಯ ಪಡೆಯಬಹುದು.

ನೀವು ಈ ವಿದ್ಯಾರ್ಥಿಗಳೇ ಕಟ್ಟಿ ಬೆಳೆಸಿದ ಸಂಸ್ಥೆಯ ಬಗ್ಗೆ ಆಸಕ್ತರಾಗಿದ್ದರೆ ಅವರ ವೆಬ್ಸೈಟ್ iamyuva.org ನೋಡಬಹುದು.

ಇವರಿಗೆ ನಿಮಗೆ ಇಷ್ಟಬಂದಷ್ಟು, ಕೊಂಚವಾದರೂ ಹಣ ಸಹಾಯ ಮಾಡುವ ಇಚ್ಛೆಯಾದರೆ ಕೆಳಗಿನ ಲಿಂಕ್ ಮೂಲಕ ಅವರ ಅಧಿಕೃತ ಖಾತೆಗೆ ವರ್ಗಾಯಿಸಬಹುದು.
http://www.milaap.org/fundraisers/yuvablur2

ಅಥವಾ ಈ QR code ಅನ್ನು ಸ್ಕ್ಯಾನ್ ಮಾಡಿ.


 



      
    




Thursday, January 19, 2017

ಚಾರಿತ್ರ್ಯದ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ (ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ)

     "ಮಾನವನಲ್ಲಿ ಮೊದಲೇ ಇರುವ ಪರಿಪೂರ್ಣತೆಯನ್ನ ಹೊರೆತೆಗೆದು, ಅದಕ್ಕೊಂದು ರೂಪಕೊಡುವ ಪ್ರಕ್ರಿಯೆಯೇ ಶಿಕ್ಷಣ" ಅನ್ನುವುದು ವಿವೇಕಾನಂದರ ಅತ್ಯಂತ ಜನಪ್ರಿಯ ಹೇಳಿಕೆ. ಪ್ರತೀ ಮಗುವೂ ಹುಟ್ಟುವಾಗ ಹತ್ತಿಯ ಮುದ್ದೆಯಂತೆ. ಹತ್ತಿಯ ಮುದ್ದೆಯನ್ನು ನಾವು ಶುದ್ಧ ನೀರಿನಲ್ಲಿ ಹಾಕಿದರೆ, ಅದು ಶುದ್ಧ ನೀರನ್ನು ಹೀರಿಕೊಳ್ಳುತ್ತದೆ. ಕೊಳಕಿನಲ್ಲಿ ಹಾಕಿದರೆ ಕೊಳಕನ್ನು ಅಂಟಿಸಿಕೊಳ್ಳುತ್ತದೆ. ಹಾಗೆಯೇ ಮಗುವಿನಲ್ಲಿ ನಾವು ತುಂಬುವ ವಿಚಾರಗಳು ಹಾಗೂ ಕೊಡುವ ಸಂಸ್ಕೃತಿ ಒಳ್ಳೆಯದೋ ಕೆಟ್ಟದ್ದೋ ಎಂಬುದರ ಮೇಲೆ, ಮಗುವಿನ ವ್ಯಕ್ತಿತ್ವ ರೂಪುತಳೆಯುತ್ತದೆ. ದೇಶಕ್ಕೆ ಜೀವ ಅಂತ ಇರುವುದು ಭಾವನಾತ್ಮಕವಾಗಿ ಮಾತ್ರ, ನಿಜವಾಗಿಯೂ ಜೀವವಿರುವುದು ದೇಶದಲ್ಲಿರುವ ಜನರಿಗೆ. ಆದ್ದರಿಂದ ನಾವು ದೇಶಕ್ಕೆ ಏನು ಟ್ರೀಟ್ ಮೆಂಟ್ ಕೊಡಬೇಕು ಅಂದುಕೊಳ್ಳುತ್ತೇವೋ, ಅದನ್ನು ಕೊಡಬೇಕಿರುವುದು ಅಲ್ಲಿಯ ಜನಕ್ಕೆ. ಬೆಳೆಯುವ ಸಿರಿ ಮೊಳಕೆಯಲ್ಲಾದ್ದರಿಂದ, ನಾವು ಚಾರಿತ್ರ್ಯವನ್ನು ನಿರ್ಮಾಣ ಮಾಡಬೇಕಿರುವುದು ಮಕ್ಕಳದ್ದು. ವಿವೇಕಾನಂದರ ದೃಷ್ಟಿಯಲ್ಲಿ, "ಚಾರಿತ್ರ್ಯದ ನಿರ್ಮಾಣದ ಮೂಲಕ ದೇಶದ ನಿರ್ಮಾಣ" ಹೆಗೆ? ಏನು? ಎತ್ತ? ಅಂತೊಮ್ಮೆ ಕಣ್ಣಾಡಿಸೋಣ.

     "ಚಾರಿತ್ರ್ಯ" ಎಂಬುದು ಒಂದು ಗುಣವಲ್ಲ. ಅದು ಗುಣ ಸಮೂಹ. ವ್ಯಕ್ತಿಯೊಬ್ಬನ ಸುಗುಣ-ದುರ್ಗುಣಗಳೆರಡೂ ಸೇರಿ, ಆತನ ಒಟ್ಟೂ ಗುಣ ಏನು? ಎಂಬ ಪ್ರಶ್ನೆಗೆ ಉತ್ತರವೇ, ಆತನ "ಚಾರಿತ್ರ್ಯ"! ಚಾರಿತ್ರ್ಯ ಎಂಬುದು ಸಾಧಿಸಲ್ಪಡುವುದು ಅಥವಾ ಬಾಧಿಸಲ್ಪಡುವುದು, ಒಂದೆರಡು ಸಂಗತಿಗಳಿಂದಲ್ಲ. ಮಗುವೊಂದು ಬೆಳೆಯುತ್ತಿರುವ ಪರಿಸರ, ಮಾತನಾಡುತ್ತಿರುವ ಭಾಷೆ, ವಾಸವಿರುವ ಸ್ಥಳ ಹಾಗೂ ಭೌಗೋಳಿಕ ಪ್ರದೇಶ, ಅದರ ತಂದೆ ತಾಯಿಯರ ಸಂಸ್ಕೃತಿ, ರೀತಿ ರಿವಾಜು, ಅದು ಹೋಗುವ ಶಾಲೆ, ಅಲ್ಲಿಯ ಮೇಷ್ಟ್ರು, ಸಹಪಾಠಿಗಳು ಹೀಗೇ.... ಇವೆಲ್ಲವೂ ಸೇರಿ ಮಗುವೊಂದರ ಚಾರಿತ್ರ್ಯವನ್ನು ನಿರ್ಮಿಸುತ್ತಿರುತ್ತವೆ. "ಚಾರಿತ್ರ್ಯ ನಿರ್ಮಾಣದ ಮೂಲಕವೇ ರಾಷ್ಟ್ರ ನಿರ್ಮಾಣ ಸಾಧ್ಯ" ಅಂತ ಇಲ್ಲೇ ರುಜುವಾಗುವುದು ಹೇಗೆಂದರೆ, ಮಗುವೊಂದು ಬೆಳೆಯುತ್ತಿರುವ ರಾಷ್ಟ್ರದಲ್ಲಿನ ಪರಿಸರವೇ ಮಗುವಿನೊಳಗಿನ ಚಾರಿತ್ರ್ಯವನ್ನು ಪೋಷಿಸುತ್ತಿರುವುದು! ಹಾಗಾಗಿ "ಅದು ಚೆನ್ನಾಗಿದ್ದರೆ ಅದು ಚೆಂದ ಮತ್ತು ಇದು ಚೆನ್ನಾಗಿದ್ದರೆ ಅದು ಚೆನ್ನ" ಅನ್ನುವಂತ ಅವಿನಾಭಾವ ಸಂಬಂಧ ಇವೆರಡರದ್ದು!

"ಒಂದು ದೇಶ ಉನ್ನತಿ ಹಾಗೂ ಅವನತಿ ಇವೆರಡನ್ನೂ ಸಾಧಿಸುವುದು ಅಲ್ಲಿಯ ತಾಯಂದಿರ ಕೈಯಲ್ಲಿರುತ್ತದೆ. ದೇಶ ಹಿರಿಯಣ್ಣನಾದರೂ ಅವರೇ ಕಾರಣ, ಅಧೋಗತಿಗಿಳಿದರೂ ಅವರೇ ಕಾರಣ" ಅನ್ನುವುದು ಸ್ವಾಮೀ ವಿವೇಕಾನಂದರ ನುಡಿ. ಮಕ್ಕಳ ಚಾರಿತ್ರ್ಯವನ್ನು ನಿರ್ಮಿಸುವುದು ಮುಖ್ಯವಾಗಿ ತಾಯಂದಿರು. ಅವರು ತಮ್ಮ ಮಗುವನ್ನ ಸಚ್ಚಾರಿತ್ರ್ಯವಂತರನ್ನಾಗಿ ಮಾಡುತ್ತಾರೋ ಅಥವಾ ಪೋಕರಿಗಳನ್ನಾಗಿ ಮಾಡುತ್ತಾರೋ ಅನ್ನುವುದರ ಮೇಲೆ ದೇಶ ಅಭಿವೃದ್ಧಿ ಹೊಂದುತ್ತದೆ ಅಥವಾ ಅಧಃಪತನಕ್ಕಿಳಿಯುತ್ತದೆ ಎಂಬುದು ಅದರ ಸಾರಾಂಶ.
ಶಿಕ್ಷಣ ಅನ್ನುವುದು ಮಗುವೊಂದರ ಚಾರಿತ್ರ್ಯವನ್ನು ರೂಪಿಸದಿದ್ದರೆ, ಅದು ಎಷ್ತೇ ಜ್ಞಾನವನ್ನು ಮಗುವಿನೊಳಗೆ ತುಂಬಿದ್ದರೂ, ಪುಡಿಗಾಸಿನ ಪ್ರಯೋಜನವೂ ಇಲ್ಲ. "ಶಿಕ್ಷಣ ವೆಂದರೆ ಒಂದಷ್ತು ಮಾಹಿತಿಗಳನ್ನು ತಲೆ ಒಳಗೆ ಬಿಟ್ಟುಕೊಂಡು, ಆಮೇಲೆ ಅವುಗಳೇ ಒಳಗೆ ಕಿತ್ತಾಡಿಕೊಳ್ಳುವಂತೆ ಮಾಡುವ ಗೊಂದಲಕಾರಿ ಪ್ರಕ್ರಿಯೆ ಅಲ್ಲ. ನೀನು ಐದೇ ಐದು ಸುಗುಣಗಳ್ಳನ್ನು ನಿನ್ನ ಚಾರಿತ್ರ್ಯದಲ್ಲಿ ಅಳವಡಿಸಿಕೊಂಡಿದ್ದರೂ, ಸಚ್ಚಾರಿತ್ರ್ಯವಿಲ್ಲದೇ ಕೇವಲ ಉರು ಹೊಡೆಯುವ, ಸಂಪೂರ್ಣ ಗ್ರಂಥಾಲಯವನ್ನೇ ಗಟ್ಟುಹೊಡೆದು ಕುಳಿತಿರುವ ಮನುಷ್ಯನಿಗಿಂತ ನೀನು ಹೆಚ್ಚು ವಿದ್ಯಾವಂತ" ಅನ್ನುವ ಛಾತಿ ವಿವೇಕಾನಂದರದ್ದು! ಜಗತ್ತನ್ನು ತಲ್ಲಣಗೊಳಿಸಿದ ಉಗ್ರಗಾಮಿಗಳಲ್ಲಿ ಅನೇಕರು ಯೂನಿವರ್ಸಿಟಿ ಟಾಪರ್ಗಳು, ಆದರೆ ಅವರೆಲ್ಲ ಮಡಿದ್ದು ಅನಾಹುತವನ್ನೇ ಹೊರತು, ಉಪಕಾರವ್ನ್ನಲ್ಲ. ಅದ್ದರಿಂದ ನಿರ್ಮಿಸಬೇಕಿರುವುದು ಚಾರಿತ್ರ್ಯವನ್ನೇ ಹೊರತು, ಕೇವಲ ಮಾಹಿತಿಗಳ ಗಟ್ಟು ಹೊಡೆದು ಪಡೆದ ಡಿಗ್ರಿ ಹೋಲ್ಡರ್ಗಳನ್ನಲ್ಲ. "ಉಕ್ಕಿನ ನರಗಳುಳ್ಳ, ಕಬ್ಬಿಣದ ಮಾಂಸಖಂಡಗಳನ್ನುಳ್ಳ, ತೀಕ್ಷ್ಣ ಬುದ್ಧಿಮತ್ತೆಯ ನೂರೇ ನೂರು ಯುವಕರನ್ನು ಕೊಡಿ. ಇಡೀ ಜಗತ್ತಿನಲ್ಲೇ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತೇನೆ" ಅಂತ ಹೆಳಿದ್ದ ವೀರಸಂನ್ಯಾಸಿ, ವಿವೇಕಾನಂದ. ವಿವೇಕಾನಂದರ ಪ್ರಕಾರ ಮಕ್ಕಳಲ್ಲಿ ಅಂತ ಚಾರಿತ್ರ್ಯವನ್ನು ಬೆಳೆಸಬೇಕು! ಅಳುವ, ನೈಗೊರೆಯುವ, ಬಲಹೀನದ ಚಾರಿತ್ರ್ಯವನ್ನಲ್ಲ! ಚಾರಿತ್ಯವನ್ನು ನಿರ್ಮಿಸುವಾಗ ಸಂವೇದನೆಗಳನ್ನು ಸೂಕ್ಷ್ಮವಾಗಿಯೂ, ಮನಸ್ಥಿತಿಯನ್ನು ಬಂಡೆಯಂಥಹ ಗಟ್ಟಿಯದ್ದಾಗಿಯೂ ಬೆಳೆಸಬೇಕು.

ಒಳ್ಳೆಯದನ್ನು ಮಾಡಲು ಪ್ರಯತ್ನಿಸುತ್ತಾ ಹೋದಾಗ, ಮನುಷ್ಯ ಒಳ್ಳೆಯದನ್ನೇ ಮಾಡುತ್ತಾ ಹೋಗುತ್ತಾನೆ. ಕೆಟ್ಟದ್ದನ್ನು ಮಾಡಲು ಶುರುಮಾಡಿದರೆ, ಅನಾಹುತಗಳು ಒಂದೊಂದಾಗಿ ಜರುಗುತ್ತವೆ ಅನ್ನುವ ಕಲ್ಪನೆ ಚಾರಿತ್ರ್ಯದಲ್ಲಿ ಪಡಿಯಚ್ಚು ಮೂಡಿಸಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. "ಫೂಟ್ ಬಾಲ್ ಆಡುವುದು ಭಗವದ್ಗೀತೆ ಓದುವುದಕ್ಕಿಂತ ಹೆಚ್ಚಾಗಿ ನಿಮ್ಮನ್ನು ಭಗವಂತನ ಬಳಿ ಕರೆದೊಯ್ಯುತ್ತದೆ. ಇವು ಕಠಿಣ ಪದಗಳು. ಆದರೆ ನಾನು ಹೇಳಲೇಬೇಕಾಗಿದೆ. ಏಕೆಂದರೆ ನಾನು ನಿಮ್ಮನ್ನೆಲ್ಲ ಅದಮ್ಯವಾಗಿ ಪ್ರೀತಿಸುತ್ತೇನೆ. ಗಟ್ಟಿ ಎದೆಯ, ಬಲಾಢ್ಯ ದೇಹದ ಯುವಕರಾಗಿ ನೀವು ಭಗವದ್ಗೀತೆಯ ಸಾಲುಗಳನ್ನು ಹೆಚ್ಚು ಅರ್ಥ ಮಾಡಿಕೊಳ್ಳುವಿರಿ" ಅಂತೊಮ್ಮೆ ಹೇಳಿದ್ದರು ವಿವೇಕರು. ದೇಹ ಮತ್ತು ಮನಸ್ಸು ಒಂದರ ಮೆಲೊಂದು ಪರಿಣಾಮಗಳನ್ನು ಬೀರುತ್ತವೆ. ಗಟ್ಟಿ ಚಾರಿತ್ರ್ಯ ರೂಪುಗೊಳ್ಳುವ ಮೊದಲು ಗಟ್ಟಿ ದೇಹ ರೂಪುಗೊಳ್ಳಬೇಕಾಗುತ್ತೆ. ಆಗ ಮಾತ್ರ ಗಟ್ಟಿ ದೇಶದ ನಿರ್ಮಾಣ ಕೂಡ ಸಾಧ್ಯ!

ಜ್ಞಾನ ಮನುಷ್ಯನಿಗೆ ಭೂಷಣ. ಆದರೆ ವಿನಯ ಜ್ಞಾನಕ್ಕೇ ಭೂಷಣ. ಈ ವಿನಯವನ್ನು ರೊಪಿಸದ, ಚಾರಿತ್ರ್ಯವನ್ನು ರೂಪಿಸದ ವಿದ್ಯಾಭ್ಯಾಸ ನಿಷ್ಪ್ರಯೋಜಕ. ಅದರಿಂದ ಜೊಳ್ಳುಗಳನ್ನು ನಿರ್ಮಿಸಬಹುದೇ ವಿನಃ, ರಾಷ್ಟ್ರ ನಿರ್ಮಿಸುವ ಚೈತನ್ಯಗಳನ್ನು ಉತ್ಪಾದಿಸಲು ಸಾಧ್ಯವಿಲ್ಲ. ವಿವೇಕಾನಂದರು ಚಾರಿತ್ರ್ಯ ನಿರ್ಮಾಣದ ಒಂದು ಭಾಗವಾಗಿ, ಯುವಕರಿಗೆ "ತಮ್ಮನ್ನು ತಾವೇ ಬಲವಾಗಿ ನಂಬುವುದನ್ನು" ಹೇಳಿಕೊಡುವುದನ್ನು ಬಲವಾಗಿ ಪ್ರತಿಪಾದಿಸಿದ್ದರು. ತನ್ನನ್ನೇ ತಾನು ನಂಬದವ, ರಾಷ್ಟ್ರವನ್ನು ನಿರ್ಮಿಸಿಯಾನೆ? "ನಿಮ್ಮ ಮೇಲೆ ನಿಮಗೊಂದು ಅದಮ್ಯ ನಂಬಿಕೆ ಇರಲಿ. ನರೇಂದ್ರ ಚಿಕ್ಕವನಿರುವಾಗಿನಿಂದಲೂ ತನ್ನ ಮೇಲೆ ಇಟ್ಟುಕೊಂಡಿರುವ ನಂಬಿಕೆ ಇದೆಯಲ್ಲ? ಅದೇ ಇವತ್ತು ನರೇಂದ್ರನನ್ನು ವಿವೇಕಾನಂದರನ್ನಾಗಿ ಮಾಡಿರುವುದು. ನೀವೂ ನಿಮ್ಮ ಮೇಲೆ ಅಂಥದ್ದೊಂದು ಬಲವಾದ ನಂಬಿಕೆಯನ್ನು ಇಟ್ಟುಕೊಳ್ಳಿ. ಮಹಾತ್ಮರು ತಾವು ಮಹಾತ್ಮರಾಗಬೇಕಾಗಿರುವವರು ಎಂಬ ಪ್ರಜ್ಞೆ ಹುಟ್ಟಿದಾಗಿನಿಂದ ಬೆಳೆಸಿಕೊಂಡಿರುತ್ತಾರೆ. ಆದ್ದರಿಂದ ಮುಂದೆ ನಿಜವಾಗಿಯೂ ಮಹಾತ್ಮರಾಗುತ್ತಾರೆ" ಅಂತ ಪ್ರತಿಪಾದಿಸಿದ್ದರು ವಿವೇಕಾನಂದರು. ಅಂಥದ್ದೊಂದು ಚಾರಿತ್ರ್ಯ ನಮ್ಮದಾಗಬೇಕು.

ಆವತ್ತು ವಿವೇಕರು ಇದ್ದ ಕಾಲದಲ್ಲಿ ಭಾರತ ದಾಸ್ಯ, ಬಡತನ, ರೋಗ ರುಜಿನಗಳಿಂದ ಬಳಲಿ ನಿತ್ರಾಣವಾಗಿತ್ತು. ಬಹುಪಾಲು ಜನಸಮೂಹ ನಂಬಿಕೆ ಕಳೆದುಕೊಂಡು, ಬೇಸತ್ತುಹೋಗಿದ್ದರು. ಅವರನ್ನೆಲ್ಲ ಬಡಿದೆಬ್ಬಿಸುವ ಕೆಲಸವನ್ನ ವಿವೇಕರು ಮಾಡಿದರು. ಇವತ್ತಿಗೆ ಭಾರತಕ್ಕೆ ಆ ತರಹದ ಸಂಕಟಗಳಿಲ್ಲದಿದ್ದರೂ, ಪರಿಸ್ಥಿತಿ ಭಿನ್ನವಾಗಿ ಏನೂ ಇಲ್ಲ. ಮತ್ತೊಂದಿಷ್ಟು ಸಂಕೋಲೆಗಳು ದೇಶವನ್ನ ಬಂಧಿಸಿಟ್ಟಿವೆ. ವಿವೇಕರ ಚಿಂತನೆಗಳ ನೆಲೆಗಟ್ಟಿನಲ್ಲಿ ಚಾರಿತ್ರ್ಯವನ್ನು ನಿರ್ಮಿಸಿಕೊಂಡು, ಆ ಮೂಲಕ ದೇಶವನ್ನು ಮತ್ತೆ ಹಳೆಯ ವೈಭವಕ್ಕೆ ಕರೆದೊಯ್ಯಬೇಕಿರುವುದು ನಮ್ಮೆಲ್ಲರ ಕರ್ತವ್ಯ! ಬಡತನ, ನಿರುದ್ಯೋಗ ಮುಂತಾದ ಆಂತರಿಕ ಸಮಸ್ಯೆಗಳು ಒಂದೆಡೆಯಾದರೆ, ಯುದ್ಧ, ಭಯೋತ್ಪಾದನೆಯಂಥ ಪ್ರಚೋದಿತ ಸಂಕಟಗಳು. ಭ್ರಷ್ಟಾಚಾರದಂತಹ ಕ್ಯಾನ್ಸರ್ ಇನ್ನೊಂದೆಡೆ. ಇವೆಲ್ಲವನ್ನೂ ಮೆಟ್ಟಿನಿಂತು ಘರ್ಜಿಸುವ ತಾಕತ್ತುಳ್ಳ ಯುವಸಮೂಹವೊಂದು ತಯಾರಾಗಬೇಕು. ತಯಾರಾಗಬೇಕು ಅಂದರೆ, ಅಂಥ ಚಾರಿತ್ರ್ಯವನ್ನು ನಾವು ಹೊಸಪೀಳಿಗೆಯಲ್ಲಿ ಬೆಳೆಸಬೇಕು. "ನಾನು ನನ್ನ ದೇಹವನ್ನು ಒಂದು ಉಪಯೋಗಿಸಿದ ಬಟ್ಟೆಯಂತೆ ತೆಗೆದಿಟ್ಟು ಹೋಗಬಹುದು, ಆದರೆ ಆತ್ಮವಾಗಿ ಜಗತ್ತಿನ ಪ್ರತೀ ಜೀವಿಯೂ ತಾನು ಪರಮಾತ್ಮನಲ್ಲಿ ಒಂದು ಎಂದು ಅರಿಯುವವರಿಗೂ ಕೆಲಸ ಮಾಡುತ್ತಿರುತ್ತೇನೆ" ಅಂತ ಹೇಳಿದ್ದ ವಿವೇಕರು ನಮಗೆಲ್ಲ ಸ್ಫೂರ್ತಿಯಾಗಿ ಬೆನ್ನಿಗೆ ನಿಂತೇ ನಿಂತಿರುತ್ತಾರೆ. ಅದನ್ನರಿತು ಚಾರಿತ್ರ್ಯ ನಿರ್ಮಿಸೊಂಡರೆ, ಶೀಘ್ರದಲ್ಲಿ ವಿವೇಕರ ಕನಸಿನ "ವಿಶ್ವಗುರು ಭಾರತ" ವನ್ನು ನಾವು ಕಾಣಬಹುದು!

ಜೈ ಹಿಂದ್






Tuesday, January 17, 2017

That's how, YUVA was Born..!!

     That was a pleasant vacation for them. Those school boys, who have just completed their high school were on a trip and that trip was to the native village of one in the group. The "....." was a village, . .......'s native place. They were just tender kids, who could play outside and enjoy the day to the fullest, that too in the green filled village of Udupi and they did it obviously. But then went the sun down. The boys returned home only to know that, they have to spend hours until next morning with lights produced only by kerosene and stuffs! No electricity! Those boys, brought in a beautifully developed city like Mysore had never an idea of this. Dharam Veer, in specific, was actually scared of darkness.
     "Experience is the best teacher", an old proverb of English famously says, and this worked out perfectly with them. They decided to work, rather than, to complaint and curse the Nation! The energetic youth with their blood boiling, can easily dream the things out. But, to bring it into action , needs an invincible determination. Fortunately, these boys had it!
The team was already there, all dedicated and work was infront. Plan was to be ready and enthusiasm was already ready with them, to jump into the ground of work. There born a tiny organization, which is now making everyone to sit straight and look upon it, "The YUVA". Yes, Youth United for a Vision to Achieve! 
     Now the organization has grown and young zealous souls being included every year, YUVA has been helping open heartedly the Rural mass of India. We collect funds by organizing various pragrammes, go for a scientific survey to mark worthy families in most interiors of country side, buy Solar kits and install them to those marked houses, just to see those invaluable smiles on innocent people there, when their children are able to study without obstacles even upto late night! This is Yuva in brief!!!
     We have till now lit up 219 houses and moving on! We are again going for a tremendous light up- BLUR 2. A mission of lighting 21 villages in just 21 hours, in and around Joida, of Karwar District. We have the technical team all set, but need monetary support, a little funds. Please support us and IT IS YOU WHO IS GOING TO BE THE REASON BEHIND THAT AWESOME SMILE OF A VILLAGE CHAMP, WHEN IT SEES LIGHTS ON AT STUDY ROOM EVEN AT NIGHT! Be the change!

To Donate, click on the link below:
http://www.milaap.org/fundraisers/yuvablur2

Saturday, January 14, 2017

Know your Yuva!

ಯುವಾ ಅಂದರೆ..?

"ಇವತ್ತಿನ ಕಾಲದಲ್ಲಿ, ಯುವ ಜನಾಂಗ ನಿರುಪಯೋಗಿಯಾಗಿದೆ ಎಂದು ಹೇಳುತ್ತಾರೆ.
ಆದರೆ ನಾನು ಹೇಳುತ್ತೇನೆ ಕೇಳಿ, ಇವತ್ತಿನ ಯುವ ಜನಾಂಗ ನಿರುಪಯೋಗಿಸಲ್ಪಟ್ಟಿದೆ, ಅಷ್ಟೇ!"

ತರುಣ-ತರುಣಿಯರ ಅಗಾಧ ಶಕ್ತಿಯನ್ನು ಸಮರ್ಥವಾಗಿ ಉಪಯೋಗಿಸಲೇ YUVA(Youth United For Vision Achievement) ಎಂಬ ಎನ್ ಜಿ ಓ(ರಿಜಿಸ್ಟರ್ಡ್) ಒಂದನ್ನು ನಾವೆಲ್ಲ ವಿದ್ಯಾರ್ಥಿಗಳೇ ಸೇರಿ ಶುರುಮಾಡಿದ್ದು! ಯುವಶಕ್ತಿಯನ್ನು ಒಗ್ಗೂಡಿಸಿ, ಸಮಾಜ ಮತ್ತು ದೇಶಕ್ಕೆ ಬದ್ಧವಾಗಿರುವಂತೆ ಹರಿಯಬಿಡುವುದೇ ನಮ್ಮ ಸಂಘಟನೆಯ ಮೂಲ ಉದ್ದೇಶ.
ಇದಕ್ಕಾಗಿ ನಾವು ಪ್ರಪ್ರಥಮವಾಗಿ ಆಯ್ದುಕೊಂಡ ಯೋಜನೆ "ಬೆಳಕ ಹರಡುವುದು"! ಹೌದು, ಸಮಾಜಿಕವಾಗಿ ಕತ್ತಲೆಯಲ್ಲಿರುವುದಲ್ಲದೇ, ಸೂರ್ಯ ಮುಳುಗಿದ ಮೇಲೆ ಅಕ್ಷರಷಃ ಕತ್ತಲು ಕವಿಯುವ, ಕರೆಂಟು ಇನ್ನೂ ಸಿಗದಿರುವ ಹಳ್ಳಿಗಳು ನಮ್ಮ ಕಾರ್ಯಸ್ಥಾನ! ಅವರೆಗೆಲ್ಲ ಪರಿಸರಪ್ರೇಮಿಯೂ ಆದ ಸೌರಶಕ್ತಿಯಿಂದ ಬೆಳಕು ನೀಡುವುದು, ನಮ್ಮ ಪ್ರಮುಖ ಧ್ಯೇಯೋದ್ದೇಶ.
ಇದರ ಜೊತೆಯೇ, ಕಡುಬಡವರ ಜೀವನಮಟ್ಟವನ್ನು ಏರಿಸಲು ಪ್ರಯತ್ನಿಸುವುದರ ಮೂಲಕ, ಅಲ್ಲಿಯ ಮಕ್ಕಳೂ ಉತ್ತಮ ವಿದ್ಯಾಭ್ಯಾಸ ಮತ್ತು ಆರೋಗ್ಯವನ್ನು ಹೊಂದಿ, ಸಮಾಜದಲ್ಲಿ ತಲೆಯೆತ್ತಿ ಬದುಕುವಂತೆ ಮಾಡುವುದು, ಭರವಸೆಯ ನಾಳೆಗಳನ್ನು ಅವರದ್ದಾಗಿಸುವುದು ನಮ್ಮ ಹಸಿಗನಸುಗಳಲ್ಲೊಂದು.

ನಮ್ಮ ಧ್ಯೇಯೋದ್ದೇಶ:

ಗ್ರಾಮೀಣ ಭಾಗದ ಸಂಪೂರ್ಣ ಅಭಿವೃದ್ಧಿ ಮತ್ತು ಗ್ರಾಮೀಣ ಜನತೆಯ ಬಲವರ್ಧನೆ.
ಯುವಜನತೆಗೆ ದೇಶದ ಏಳಿಗೆಯಲ್ಲಿ ತಮ್ಮ ಜವಾಬ್ದಾರಿಯನ್ನು ಮನವರಿಕೆ ಮಾಡಿ, ಆ ಜವಾಬ್ದಾರಿಯನ್ನು ಹೊರಲು ಅವರನ್ನು ಕಟಿಬದ್ಧಗೊಳಿಸುವುದು.


ನಮ್ಮ ಗುರಿಗಳು:

ಪ್ರಾಥಮಿಕ ಗುರಿಗಳು:
* ಗ್ರಾಮೀಣ ಭಾರತೀಯರ ಜೀವನಮಟ್ಟ ಸುಧಾರಿಸುವುದು ಹಾಗೂ ತಮ್ಮ ದಿನನಿತ್ಯದ ಜೀವನದಲ್ಲಿ ಸಾಂಪ್ರದಾಯಿಕ ಶಕ್ತಿಮೂಲಗಳ ಮೇಲಿನ ಅವರ ಅವಲಂಬನೆಯನ್ನು ಕಡಿಮೆ ಮಾಡುವುದು. ಇದು ಅವರ ಹಣಕಾಸು ಸ್ಥಿತಿ ಮಾತು ಆರೋಗ್ಯ ಸ್ಥಿತಿಗಳನ್ನೆರಡನ್ನೂ ಸುಧಾರಿಸುತ್ತದೆ.
*ಅವರ ವಿಧ್ಯಾಭ್ಯಾಸಕ್ಕೆ ಸಹಾಯ ಮತ್ತು ಅವರ ಆದಾಯಕ್ಕೆ ಸಹಾಯಕವಾಗುವಂತೆ ಪರ್ಯಾಯ ಕೆಲಸಗಳನ್ನು ಪಡೆಯಲು ಸಹಾಯ.
*ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಿಕೆ.
*ಯುವಜನಾಂಗದ ಮತ್ತು ಮಹಿಳೆಯರ ಬಲವರ್ಧನೆ.
*ಬಡವರ ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಸಹಾಯ.
*ಸ್ವಯಂ ಉದ್ಯೋಗ, ಸಣ್ಣ ಮಟ್ತದ ಫೈನಾನ್ಸ್ , ಮತ್ತು SHG ಗಳಿಗೆ ಉತ್ತೇಜನ.
*ಇವೆಲ್ಲ ಕಾರ್ಯಗಳೂ ಸದಾ ಸುಲಲಿತವಾಗಿರುವಂತೆ, ನಮ್ಮ ತಂತ್ರಜ್ಞಾನಗಳನ್ನು ಸದಾ ಅಭಿವೃದ್ಧಿಪಡಿಸುತ್ತಿರುವುದು.

ಉಪ ಗುರಿಗಳು:
* ಮಳೆ ನೀರು ಕೊಯ್ಲು(Rain Water harvesting)ಗೆ ಉತ್ತೇಜನ.
*ಗಿಡಗಳನ್ನು ನೆಡುವುದು ಮತ್ತು ಪರಿಸರ ಸಂರಕ್ಷಣೆಯ ಕಾರ್ಯಗಳಿಗೆ ಉತ್ತೇಜನ.
* ವನ್ಯಜೀವಿಗಳ ಮಾರಣಹೋಮದ ವಿರುದ್ಧ, ಬೇಟೆಯ ವಿರುದ್ಧ ಧ್ವನಿ ಎತ್ತುವುದು.
*ನೈಸರ್ಗಿಕ ವಿಕೋಪ ಮತ್ತು ಉಗ್ರ ದಾಳಿಗಳಂತಹ ತುರ್ತು ಪರಿಸ್ಥಿತಿಗಳಲ್ಲಿ ಜನಕ್ಕೆ ಸಹಾಯ ಒದಗಿಸುವುದು ಮಾತು ವಿಪತ್ತು ನಿರ್ವಹಣೆ ಹೇಗೆ ಎಂಬುದರ ಕುರಿತು ಜನರಲ್ಲಿ ಅರಿವು ಮೂಡಿಸುವುದು.
* ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಭಾರತದ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ರಕ್ಷಿಸುವ ಕಾರ್ಯಕ್ರಮ ಮತ್ತು ಯೋಜನೆಗಳನ್ನು ರೂಪಿಸಿ, ಕಾರ್ಯರೂಪಕ್ಕೆ ತರುವುದು.


Wednesday, January 11, 2017

* ಪ್ರೆಸೆನ್ಸ್ ಆಫ್ ಮೈಂಡ್ ಅಂದ್ರೆ.....*

ಅಮೇರಿಕೆಯಲ್ಲಿ ಒಮ್ಮೆ ವಿವೇಕಾನಂದರು ರೈಲೊಂದರಲ್ಲಿ ಪ್ರಯಾಣಿಸುತ್ತಿರುವಾಗ ನಡೆದ ಘಟನೆಯಿದು. ವಿವೇಕಾನಂದರು ಕುಳಿತಿದ್ದ ಎದುರು ಸೀಟುಗಳಲ್ಲಿ ಮೂವರು ಹುಡುಗಿಯರು ಕುಳಿತಿದ್ದರು. ವಿವೇಕಾನಂದರ ಕಾವಿ ಬಟ್ಟೆ ಅವಕ್ಕೆ ವಿಚಿತ್ರವಾಗಿ ಕಂಡಿರಬೇಕು. ಹದಿಹರೆಯದ ತರ್ಲೆಗಳು ಬೇರೆ. ವಿವೇಕಾನಂದರನ್ನು ಇಕ್ಕಟ್ಟಿಗೆ ಸಿಲುಕಿಸೋಣ, ಗೇಲಿ ಮಾಡೋಣ ಅಂತ ಜಬರ್ದಸ್ತಾಗಿ ಐಡಿಯಾ ಹಾಕಿದರು. ವಿವೇಕಾನಂದರ ಕೈಯಲ್ಲಿದ್ದ ಪ್ರತಿಷ್ಠಿತ ವಾಚು ಇವರ ಕಣ್ಣಿಗೆ ಬಿದ್ದಿತ್ತು. ಭಾರತದ ರಾಜನೋರ್ವ ಕೊಟ್ಟ ಉಡುಗೊರೆಯದು. "ಆ ವಾಚನ್ನು ಕೊಡು. ಇಲ್ಲವಾದರೆ ನಮ್ಮ ಮೇಲೆ ದೈಹಿಕ ಹಲ್ಲೆ ನೀನು ನಡೆಸಿದೆ ಅಂತ ಪೋಲಿಸರಿಗೆ ದೂರು ನೀಡುತ್ತೇವೆ" ಅಂತ ಧಮಕಿ ಹಾಕಿದರು. ಗೊತ್ತಿಲ್ಲದ ದೇಶದಲ್ಲಿ ವಿವೇಕಾನಂದರು ಏನು ಮಾಡಬಹುದಿತ್ತು?
ಸ್ವಲ್ಪವೂ ವಿಚಲಿತರಾಗದ ಸ್ವಾಮಿಜೀ, ತಮಗೆ ಕಿವಿ ಕೇಳುವುದಿಲ್ಲ ಅನ್ನುವ ಹಾಗೆ ಅಭಿನಯಿಸಿದರು. ಸನ್ನೆಗಳ ಮೂಲ "ನೀವು ಏನು ಹೇಳುತ್ತಿದ್ದೀರೋ ಅದನ್ನ ಬರೆದು ತೋರಿಸಿ" ಅಂತ ಸೂಚಿಸಿದರು. ಪೆದ್ದು ಹುಡುಗಿಯರು ಚಂದ ಮಾಡಿ ಬರೆದು ತೋರಿಸಿ ಹುಬ್ಬು ಹಾರಿಸಿದವು . ಚೀಟಿಯನ್ನು ಪಡೆದುಕೊಂಡ ವಿವೇಕಾನಂದರು ಪ್ರಸನ್ನ ನಗೆ ಬೀರಿ, "ಪೋಲೀಸರನ್ನು ದಯವಿಟ್ಟು ಕರೆಯಿರಿ. ನಾನೂ ದೂರು ಕೊಡಬೇಕು. ಪಾಪ....ನೀವು ಬೇರೆ ಚೂರೂ ಬೇಸರಿಸಿಕೊಳ್ಳದೆ ಈಗಷ್ಟೇ ಸಾಕ್ಷಿ ಒದಗಿಸಿದಿರಿ..." ಅಂದರು. ತಬ್ಬಿಬ್ಬಾಗುವ ಸರದಿ, ಆ ಹುಡುಗಿಯರದ್ದು!
"ಗುರುತ್ವಾಕರ್ಷಣೆಯ ಪರಿಕಲ್ಪನೆ ಸೇಬುಹಣ್ಣಿನಲ್ಲಿ ಅಡಗಿ ಕುಳಿತಿತ್ತಾ? ಅಥವಾ ಮೂಲೆಯೊಂದರಲ್ಲಿ ಕುಳಿತು ನ್ಯೋಟನ್ನನ ಕಾಯುತ್ತಿತ್ತಾ?"
Vivekananda's Thought That Changes Your Attitude Towards Study !

ನಾವು "ನ್ಯೂಟನ್ ಗುರುತ್ವಾಕರ್ಷಣೆಯನ್ನು ಕಂಡುಹಿಡಿದ" ಅನ್ನುತ್ತೇವೆ. ಅಲ್ಲಾ, ಆ ಗುರುತ್ವಾಕರ್ಷಣೆ ಮೂಲೆಯಲ್ಲೊಂದು ಕಡೆ ಕುಳಿತು ಕಾಯುತ್ತಿತ್ತಾ? ನಂತರ ನ್ಯೂಟನ್ ತಲೆಯಲ್ಲಿ ಹೋಗಿ ಕುಳಿತುಕೊಂಡಿತಾ? ಆ ಜ್ಞಾನ ಮೊದಲೇ ಆತನ ಮೆದುಳಿನಲ್ಲಿ ಇತ್ತು, ಸಮಯ ಬಂತು, ಕಂಡುಕೊಂಡ, ಅಷ್ಟೇ! ಇಲ್ಲಿಯವರೆಗೆ ಜಗತ್ತು ಹೊಂದಿರುವ ಜ್ಞಾನವೆಲ್ಲವೂ "ಮನಸ್ಸು" ಎಂಬುದುರಿಂದಲೇ ಸ್ಫುರಣೆಗೊಂಡದ್ದು, ಜಗತ್ತಿನ ಸರ್ವ ಜ್ಞಾನಗಳ ಅಕ್ಷಯ ಪಾತ್ರೆ ನಿಮ್ಮ ಮನಸ್ಸಿನಲ್ಲಿಯೇ ಇದೆ! ಹೊರಗಿನ ಜಗತ್ತು ಎಂಬುವುದು ನಿಮ್ಮನ್ನು ನಿಮ್ಮದೇ ಮನಸ್ಸಿನ/ ಮೆದುಳಿನ ಅಧ್ಯಯನಕ್ಕೆ ತೊಡಗಿಸಲು ನೆರವಾಗುವ ಒಂದು ಪ್ರಚೋದನೆ ಹಾಗೂ ಅವಕಾಶ ಒದಗಿಸುವ ಪರಿಕರ, ಅಷ್ಟೇ! ಆದರೆ ಯಾವಾಗಲೂ, ಅಧ್ಯಯನದ ವಸ್ತು ನಿಮ್ಮದೇ ಮನಸ್ಸು! ನಿಮಗೆ ಅರ್ಥಮಾಡಿಸಬೇಕೆಂದರೆ, ಆವತ್ತು ನ್ಯೂಟನ್ನಿನ ತಲೆಯ ಮೇಲೆ ಬಿದ್ದ ಸೇಬು, ನ್ಯೂಟನ್ನನಿಗೆ "ಗುರುತ್ವಾಕರ್ಷಣೆಯ ಜ್ಞಾನವನ್ನು ಹೊಂದಿದ್ದ" ತನ್ನದೇ ಮನಸ್ಸಿನ ಆ ಭಾಗವನ್ನು ಅನ್ವೇಷಿಸಲು, ಹೊರಗಿನ ಜಗತ್ತು ಒದಗಿಸಿದ ಒಂದು ಅವಕಾಶ, ಅಷ್ಟೇ! ನ್ಯೂಟನ್ ತನ್ನ ಪೂರ್ವ ಆಲೋಚನೆಗಳನ್ನೆಲ್ಲ ಸಮೀಕರಿಸಿ, ಮತ್ತೊಂದು ಹೊಳಹನ್ನು ಆವತ್ತು ಕಂಡುಕೊಂಡಿದ್ದಷ್ಟೆ. ಅದನ್ನೇ ನಾವು Laws Of Gravitation ಅಂತ ಇವತ್ತು ಕರೆಯುವುದು. ಅದು ಆತನ ತಲೆ ಮೇಲೆ ಬಿದ್ದ ಸೇಬು ಹಣ್ಣಿನ ಒಳಗೂ ಇರಲಿಲ್ಲ, ಭೂಗೋಳದ ಮಧ್ಯದಲ್ಲೆಲ್ಲೋ ಅವಿತುಕೊಂಡೂ ಕೂತಿರಲಿಲ್ಲ....!"
ಜ್ಞಾನ ಮನುಷ್ಯನಲ್ಲಿ ಅಂತರ್ಗತವಾಗಿರುವ ಸಂಗತಿ. ಯಾವ ವಿಷಯದ ಬಗ್ಗೆಯೇ ಆಗಲಿ, ನಿಮಗೆ ಜ್ಞಾನ ಹೊರಗಡೆಯಿಂದೆಲ್ಲೋ ಬಂದು ನಿಮ್ಮ ತಲೆಯೊಳಗೆ ಕೂರುವುದಿಲ್ಲ! ಮನುಷ್ಯನಿಗೆ "ಗೊತ್ತಿದೆ" ಅಂತ ಶುದ್ಧ ಸೈಕಾಲಜಿಯ ಭಾಷೆಯಲ್ಲಿ ಹೇಳುವುದಾದರೆ, ಮನುಷ್ಯ ಕಂಡುಕೊಂಡಿದ್ದಾನೆ ಅನ್ನಬೇಕು! ಆತನಿಗೆ ಹೊಸದಾಗಿ ಒಂದು ವಿಷಯ ಅಥವಾ ಮಾಹಿತಿ ತಿಳಿಯಿತು ಅಂದರೆ, ಆತ ತನ್ನ ಆತ್ಮಕ್ಕೆ ಕವಿದಿರುವ ಪರದೆಯ ಸಣ್ಣ ಭಾಗವೊಂದನ್ನು ಸರಿಸಿ ಕಂಡುಕೊಂಡ ಅಂತ ಅರ್ಥ ಅಷ್ಟೆ. ಆತನ ಆತ್ಮದಲ್ಲಿ ಮೊದಲೇ ಸಕಲ ಜ್ಞಾನವೂ ಇದೆ, ಕೆಲವು ಹೊರಗಿನ ಪರಿಕರಗಳ ಮೂಲಕ ಆತ ಅದಕ್ಕೆ ಕವಿದಿರುವ ಪರದೆಯನ್ನು ಸರಿಸಿಕೊಳ್ಳಬೇಕು, ಅಷ್ಟೇ!

#ThatThoughtThatChanegesYourAttitudeTowardsStudy #ChangeYourLife


*ಭಾರತೀಯನೆಂಬ ಹೆಮ್ಮೆ ಏಕೆ ಗೊತ್ತಾ? ಅನ್ನುವುದನ್ನ ವಿವೇಕಾನಂದರು ವಿವರಿಸಿದ ರೋಮಾಂಚನದ ಕ್ಷಣ!*  #AMustRead

ಅದು ಸರ್ವಧರ್ಮ ಸಮ್ಮೇಳನ. Chicago, United States. ಸೆಪ್ಟೆಂಬರ್ ಒಂಭತ್ತು, 1893!

"ಅಮೇರಿಕಾದ ನನ್ನ ಸೋದರ ಸೋದರಿಯರೇ" ಅನ್ನುವ ಐತಿಹಾಸಿಕ ಪದಪುಂಜಕ್ಕೆ ಬಿದ್ದ ಅಭೂತಪೂರ್ವ ಚಪ್ಪಾಳೆಗಳು ಆಗಷ್ಟೇ ನಿಂತು ಸಭಾಂಗಣದಲ್ಲೊಮ್ಮೆ ಮಿಂಚು ಸಂಚಾರವಾಗಿತ್ತು. "ಇಂಥದ್ದೊಂದು ಅರ್ಥಪೂರ್ಣ ಸಮ್ಮೇಳನ ಆಯೋಜಿಸಿದ ನಿಮಗೆ ಧನ್ಯವಾದ ಸಮರ್ಪಿಸುತ್ತೇನೆ" ಅಂತ ಹೇಳುವ ಸಂದರ್ಭದಲ್ಲಿ, "ಇಂಥ ದೇಶದ ಪರವಾಗಿ ಧನ್ಯವಾದ" ಅಂತ ಬಳಸಿಕೊಂಡು,  ಪ್ರತೀ ವಾಕ್ಯದಲ್ಲೂ ಭಾರತದ ಹಿರಿಮೆಯನ್ನು ಎತ್ತಿ ಹಿಡಿದ ಬುದ್ಧಿವಂತಿಕೆ, ವಿವೇಕಾನಂದರಲ್ಲಿ ಮಾತ್ರ ಸಾಧ್ಯ!

"ವಿಶ್ವದ ಅತ್ಯಂತ ಪ್ರಾಚೀನ ಸಂನ್ಯಾಸಿ ಸಂಸ್ಕೃತಿಯ ಪರವಾಗಿ, ನಿಮಗೆ ಧನ್ಯವಾದ! ಕೋಟ್ಯಂತರ ಹಿಂದೂಗಳ ಪರವಾಗಿ ನಿಮಗೆ ಧನ್ಯವಾದ. 
ಸಹಿಷ್ಣುತೆ ಮತ್ತು ಸಕಲರನ್ನೂ ಸ್ವೀಕರಿಸುವ ಸಂಸ್ಕೃತಿಯನ್ನು ಇಡೀ ಜಗತ್ತಿಗೇ ಹೇಳಿಕೊಟ್ಟ ಧರ್ಮಕ್ಕೆ ಸೇರಿದವನು ನಾನು ಅನ್ನುವ ಹೆಮ್ಮೆ ನನ್ನದು! ಭಾರತೀಯರು ಸರ್ವರೊಂದಿಗೂ ಬೆರೆತು ಜೀವನ ನಡೆಸುವ ಜನವಷ್ಟೇ ಅಲ್ಲ, ಪ್ರತೀ ಧರ್ಮವನ್ನೂ ಸತ್ಯ ಅಂತ ಗೌರವಿಸುವ ಜನಾಂಗ ನಮ್ಮದು! ಭೂಮಿಯ ಮೇಲಿನ ಯಾವುದೇ ಧರ್ಮದ ಅಥವಾ ದೇಶದ ಜನರ ಮೇಲೆ ಸಾಮಾಜಿಕ, ರಾಜಕೀಯ ಅಥವಾ ಧಾರ್ಮಿಕ ಶೋಷಣೆಗಳಾದಾಗ, ಅವರಿಗೆಲ್ಲ ಕೈಬೀಸಿ ಕರೆದು ಬಿಗಿದಪ್ಪುಗೆ ನೀಡಿ, ಆಶ್ರಯಿಸಿದ ರಾಷ್ಟ್ರಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು! ರೋಮನ್ ದೊರೆಗಳಿಂದ ತಮ್ಮ ದೇವಸ್ಥಾನ ನಾಶವಾದಾಗ, ದಿಕ್ಕೆಟ್ಟು ಓಡಿಬಂದ ಇಸ್ರೇಲಿಗರನ್ನು ಶುದ್ಧ ಮಮತೆಯಿಂದ ಇವತ್ತಿಗೂ ಪೋಷಿಸುತ್ತಿರುವ ರಾಷ್ಟ್ರ ನನ್ನದು! ಜೊರೋಷ್ಟ್ರಿಯನ್ ದೇಶದ ಜನರು ಕಂಗೆಟ್ಟು ಬಂದಾಗ, ತುಂಬುಹೃದಯದಿಂದ ಸ್ವಾಗತಿಸಿ ಇವತ್ತಿಗೂ ಸಲಹುತ್ತಿರುವ ಧರ್ಮಕ್ಕೆ ಸೇರಿದವ ನಾನು ಎಂಬ ಹೆಮ್ಮೆ ನನ್ನದು.....!!"

#WordsThatThunderedAmerica
#ThisIsVivekanandaForYou