Powered By Blogger

Saturday, January 14, 2017

Know your Yuva!

ಯುವಾ ಅಂದರೆ..?

"ಇವತ್ತಿನ ಕಾಲದಲ್ಲಿ, ಯುವ ಜನಾಂಗ ನಿರುಪಯೋಗಿಯಾಗಿದೆ ಎಂದು ಹೇಳುತ್ತಾರೆ.
ಆದರೆ ನಾನು ಹೇಳುತ್ತೇನೆ ಕೇಳಿ, ಇವತ್ತಿನ ಯುವ ಜನಾಂಗ ನಿರುಪಯೋಗಿಸಲ್ಪಟ್ಟಿದೆ, ಅಷ್ಟೇ!"

ತರುಣ-ತರುಣಿಯರ ಅಗಾಧ ಶಕ್ತಿಯನ್ನು ಸಮರ್ಥವಾಗಿ ಉಪಯೋಗಿಸಲೇ YUVA(Youth United For Vision Achievement) ಎಂಬ ಎನ್ ಜಿ ಓ(ರಿಜಿಸ್ಟರ್ಡ್) ಒಂದನ್ನು ನಾವೆಲ್ಲ ವಿದ್ಯಾರ್ಥಿಗಳೇ ಸೇರಿ ಶುರುಮಾಡಿದ್ದು! ಯುವಶಕ್ತಿಯನ್ನು ಒಗ್ಗೂಡಿಸಿ, ಸಮಾಜ ಮತ್ತು ದೇಶಕ್ಕೆ ಬದ್ಧವಾಗಿರುವಂತೆ ಹರಿಯಬಿಡುವುದೇ ನಮ್ಮ ಸಂಘಟನೆಯ ಮೂಲ ಉದ್ದೇಶ.
ಇದಕ್ಕಾಗಿ ನಾವು ಪ್ರಪ್ರಥಮವಾಗಿ ಆಯ್ದುಕೊಂಡ ಯೋಜನೆ "ಬೆಳಕ ಹರಡುವುದು"! ಹೌದು, ಸಮಾಜಿಕವಾಗಿ ಕತ್ತಲೆಯಲ್ಲಿರುವುದಲ್ಲದೇ, ಸೂರ್ಯ ಮುಳುಗಿದ ಮೇಲೆ ಅಕ್ಷರಷಃ ಕತ್ತಲು ಕವಿಯುವ, ಕರೆಂಟು ಇನ್ನೂ ಸಿಗದಿರುವ ಹಳ್ಳಿಗಳು ನಮ್ಮ ಕಾರ್ಯಸ್ಥಾನ! ಅವರೆಗೆಲ್ಲ ಪರಿಸರಪ್ರೇಮಿಯೂ ಆದ ಸೌರಶಕ್ತಿಯಿಂದ ಬೆಳಕು ನೀಡುವುದು, ನಮ್ಮ ಪ್ರಮುಖ ಧ್ಯೇಯೋದ್ದೇಶ.
ಇದರ ಜೊತೆಯೇ, ಕಡುಬಡವರ ಜೀವನಮಟ್ಟವನ್ನು ಏರಿಸಲು ಪ್ರಯತ್ನಿಸುವುದರ ಮೂಲಕ, ಅಲ್ಲಿಯ ಮಕ್ಕಳೂ ಉತ್ತಮ ವಿದ್ಯಾಭ್ಯಾಸ ಮತ್ತು ಆರೋಗ್ಯವನ್ನು ಹೊಂದಿ, ಸಮಾಜದಲ್ಲಿ ತಲೆಯೆತ್ತಿ ಬದುಕುವಂತೆ ಮಾಡುವುದು, ಭರವಸೆಯ ನಾಳೆಗಳನ್ನು ಅವರದ್ದಾಗಿಸುವುದು ನಮ್ಮ ಹಸಿಗನಸುಗಳಲ್ಲೊಂದು.

ನಮ್ಮ ಧ್ಯೇಯೋದ್ದೇಶ:

ಗ್ರಾಮೀಣ ಭಾಗದ ಸಂಪೂರ್ಣ ಅಭಿವೃದ್ಧಿ ಮತ್ತು ಗ್ರಾಮೀಣ ಜನತೆಯ ಬಲವರ್ಧನೆ.
ಯುವಜನತೆಗೆ ದೇಶದ ಏಳಿಗೆಯಲ್ಲಿ ತಮ್ಮ ಜವಾಬ್ದಾರಿಯನ್ನು ಮನವರಿಕೆ ಮಾಡಿ, ಆ ಜವಾಬ್ದಾರಿಯನ್ನು ಹೊರಲು ಅವರನ್ನು ಕಟಿಬದ್ಧಗೊಳಿಸುವುದು.


ನಮ್ಮ ಗುರಿಗಳು:

ಪ್ರಾಥಮಿಕ ಗುರಿಗಳು:
* ಗ್ರಾಮೀಣ ಭಾರತೀಯರ ಜೀವನಮಟ್ಟ ಸುಧಾರಿಸುವುದು ಹಾಗೂ ತಮ್ಮ ದಿನನಿತ್ಯದ ಜೀವನದಲ್ಲಿ ಸಾಂಪ್ರದಾಯಿಕ ಶಕ್ತಿಮೂಲಗಳ ಮೇಲಿನ ಅವರ ಅವಲಂಬನೆಯನ್ನು ಕಡಿಮೆ ಮಾಡುವುದು. ಇದು ಅವರ ಹಣಕಾಸು ಸ್ಥಿತಿ ಮಾತು ಆರೋಗ್ಯ ಸ್ಥಿತಿಗಳನ್ನೆರಡನ್ನೂ ಸುಧಾರಿಸುತ್ತದೆ.
*ಅವರ ವಿಧ್ಯಾಭ್ಯಾಸಕ್ಕೆ ಸಹಾಯ ಮತ್ತು ಅವರ ಆದಾಯಕ್ಕೆ ಸಹಾಯಕವಾಗುವಂತೆ ಪರ್ಯಾಯ ಕೆಲಸಗಳನ್ನು ಪಡೆಯಲು ಸಹಾಯ.
*ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಿಕೆ.
*ಯುವಜನಾಂಗದ ಮತ್ತು ಮಹಿಳೆಯರ ಬಲವರ್ಧನೆ.
*ಬಡವರ ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಸಹಾಯ.
*ಸ್ವಯಂ ಉದ್ಯೋಗ, ಸಣ್ಣ ಮಟ್ತದ ಫೈನಾನ್ಸ್ , ಮತ್ತು SHG ಗಳಿಗೆ ಉತ್ತೇಜನ.
*ಇವೆಲ್ಲ ಕಾರ್ಯಗಳೂ ಸದಾ ಸುಲಲಿತವಾಗಿರುವಂತೆ, ನಮ್ಮ ತಂತ್ರಜ್ಞಾನಗಳನ್ನು ಸದಾ ಅಭಿವೃದ್ಧಿಪಡಿಸುತ್ತಿರುವುದು.

ಉಪ ಗುರಿಗಳು:
* ಮಳೆ ನೀರು ಕೊಯ್ಲು(Rain Water harvesting)ಗೆ ಉತ್ತೇಜನ.
*ಗಿಡಗಳನ್ನು ನೆಡುವುದು ಮತ್ತು ಪರಿಸರ ಸಂರಕ್ಷಣೆಯ ಕಾರ್ಯಗಳಿಗೆ ಉತ್ತೇಜನ.
* ವನ್ಯಜೀವಿಗಳ ಮಾರಣಹೋಮದ ವಿರುದ್ಧ, ಬೇಟೆಯ ವಿರುದ್ಧ ಧ್ವನಿ ಎತ್ತುವುದು.
*ನೈಸರ್ಗಿಕ ವಿಕೋಪ ಮತ್ತು ಉಗ್ರ ದಾಳಿಗಳಂತಹ ತುರ್ತು ಪರಿಸ್ಥಿತಿಗಳಲ್ಲಿ ಜನಕ್ಕೆ ಸಹಾಯ ಒದಗಿಸುವುದು ಮಾತು ವಿಪತ್ತು ನಿರ್ವಹಣೆ ಹೇಗೆ ಎಂಬುದರ ಕುರಿತು ಜನರಲ್ಲಿ ಅರಿವು ಮೂಡಿಸುವುದು.
* ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಭಾರತದ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ರಕ್ಷಿಸುವ ಕಾರ್ಯಕ್ರಮ ಮತ್ತು ಯೋಜನೆಗಳನ್ನು ರೂಪಿಸಿ, ಕಾರ್ಯರೂಪಕ್ಕೆ ತರುವುದು.


No comments:

Post a Comment