Powered By Blogger

Wednesday, January 11, 2017

* ಪ್ರೆಸೆನ್ಸ್ ಆಫ್ ಮೈಂಡ್ ಅಂದ್ರೆ.....*

ಅಮೇರಿಕೆಯಲ್ಲಿ ಒಮ್ಮೆ ವಿವೇಕಾನಂದರು ರೈಲೊಂದರಲ್ಲಿ ಪ್ರಯಾಣಿಸುತ್ತಿರುವಾಗ ನಡೆದ ಘಟನೆಯಿದು. ವಿವೇಕಾನಂದರು ಕುಳಿತಿದ್ದ ಎದುರು ಸೀಟುಗಳಲ್ಲಿ ಮೂವರು ಹುಡುಗಿಯರು ಕುಳಿತಿದ್ದರು. ವಿವೇಕಾನಂದರ ಕಾವಿ ಬಟ್ಟೆ ಅವಕ್ಕೆ ವಿಚಿತ್ರವಾಗಿ ಕಂಡಿರಬೇಕು. ಹದಿಹರೆಯದ ತರ್ಲೆಗಳು ಬೇರೆ. ವಿವೇಕಾನಂದರನ್ನು ಇಕ್ಕಟ್ಟಿಗೆ ಸಿಲುಕಿಸೋಣ, ಗೇಲಿ ಮಾಡೋಣ ಅಂತ ಜಬರ್ದಸ್ತಾಗಿ ಐಡಿಯಾ ಹಾಕಿದರು. ವಿವೇಕಾನಂದರ ಕೈಯಲ್ಲಿದ್ದ ಪ್ರತಿಷ್ಠಿತ ವಾಚು ಇವರ ಕಣ್ಣಿಗೆ ಬಿದ್ದಿತ್ತು. ಭಾರತದ ರಾಜನೋರ್ವ ಕೊಟ್ಟ ಉಡುಗೊರೆಯದು. "ಆ ವಾಚನ್ನು ಕೊಡು. ಇಲ್ಲವಾದರೆ ನಮ್ಮ ಮೇಲೆ ದೈಹಿಕ ಹಲ್ಲೆ ನೀನು ನಡೆಸಿದೆ ಅಂತ ಪೋಲಿಸರಿಗೆ ದೂರು ನೀಡುತ್ತೇವೆ" ಅಂತ ಧಮಕಿ ಹಾಕಿದರು. ಗೊತ್ತಿಲ್ಲದ ದೇಶದಲ್ಲಿ ವಿವೇಕಾನಂದರು ಏನು ಮಾಡಬಹುದಿತ್ತು?
ಸ್ವಲ್ಪವೂ ವಿಚಲಿತರಾಗದ ಸ್ವಾಮಿಜೀ, ತಮಗೆ ಕಿವಿ ಕೇಳುವುದಿಲ್ಲ ಅನ್ನುವ ಹಾಗೆ ಅಭಿನಯಿಸಿದರು. ಸನ್ನೆಗಳ ಮೂಲ "ನೀವು ಏನು ಹೇಳುತ್ತಿದ್ದೀರೋ ಅದನ್ನ ಬರೆದು ತೋರಿಸಿ" ಅಂತ ಸೂಚಿಸಿದರು. ಪೆದ್ದು ಹುಡುಗಿಯರು ಚಂದ ಮಾಡಿ ಬರೆದು ತೋರಿಸಿ ಹುಬ್ಬು ಹಾರಿಸಿದವು . ಚೀಟಿಯನ್ನು ಪಡೆದುಕೊಂಡ ವಿವೇಕಾನಂದರು ಪ್ರಸನ್ನ ನಗೆ ಬೀರಿ, "ಪೋಲೀಸರನ್ನು ದಯವಿಟ್ಟು ಕರೆಯಿರಿ. ನಾನೂ ದೂರು ಕೊಡಬೇಕು. ಪಾಪ....ನೀವು ಬೇರೆ ಚೂರೂ ಬೇಸರಿಸಿಕೊಳ್ಳದೆ ಈಗಷ್ಟೇ ಸಾಕ್ಷಿ ಒದಗಿಸಿದಿರಿ..." ಅಂದರು. ತಬ್ಬಿಬ್ಬಾಗುವ ಸರದಿ, ಆ ಹುಡುಗಿಯರದ್ದು!

No comments:

Post a Comment